Posts

Showing posts from May 16, 2021

ಕವಿತೆ

  ಅಮ್ಮನ ಮಡಿಲು ಬದುಕು ಕಟ್ಟಿಕೊಳ್ಳಲು ಅಪ್ಪನಿಗೆ ಹೆಗಲಾಗಿ, ಒದಗುವ  ಬವಣೆಗೆ ಎದೆಯೊಡ್ಡಿ ಛಲವಾಗಿ. ತೊಡಕಿನ ನೋವಿನೆಳೆಗೆ ಅಂಜದೆ ಬದುಕ ಅಪ್ಪಿದಾಕೆ ಒಡಲ ದನಿಯೊಳಗೆ ಒಲುಮೆರಾಗ ಹೊಮ್ಮಿಸಿದಾಕೆ..! ಬಿಕ್ಕುವ ಯಾತನೆಗಳ ಬದಿಗೊತ್ತಿ, ಆಡಿಸಿ,ನಕ್ಕುನಲಿಸಿ ಉಕ್ಕುವ ಭಾವನೆಯ ಕಟ್ಟಿ,ಮಮತೆಯ ಎರೆದು ಪೋಷಿಸಿ ಎದೆಯ ಕನಸುಗಳ ಕರಗಿಸಿ, ಎರಕ ಹೊಯ್ದ ಹೊಳಪು ನಮ್ಮ ಬದುಕಿನ ಮೆರುಗು,ಜಿನುಗಿದ ನನಸ ಕಣ್ಣ ಹನಿಯು ಬದುಕ ಉಳುಕುಗಳ,ಸುಳಿವ ನೋವುಗಳ ನಡುವೆ ನಲುಗಿದ ಜೀವ,ದುಗುಡಗಳ ಹೊದ್ದರೂ ಸದ್ದಿಲ್ಲದೆ, ನಗೆಯ ಮಿಂಚು ಮೊಗದಿ ಬೀರಿ, ನಡೆದವಳು ಈಕೆ. ಬೊಗಸೆಯಲಿ ಮೊಗೆದು ಪ್ರೀತಿ ವಾತ್ಸಲ್ಯಗಳ ನೀಡಿದಾಕೆ! ---ಸಿದ್ದುಮೂರ್ತಿ,

ಪ್ರಶಸ್ತಿ

Image
 

ಚುಟುಕು

ಹೊಂಬೆಳಕು ಸುಳಿವ ಹೊನ್ನ ಬೆಳಕಿನ ಜಾಡು ಹಿಡಿದು ಕಳೆಯು ಹೊಮ್ಮಿದ ಮನದ ನೆಲೆಯಿದು ಬದುಕ ಬೆಳಗುವ ಹೊನ್ನ ಬೆಳಕಿನ ಕಾಂತಿ ಬಿಸಿಲ ಹೊನ್ನಂತೆ ಕಂಗೊಳಿಸಿದ ದಿವ್ಯ ಕಾಂತಿ -ಸಿದ್ದುಮೂರ್ತಿ

ಚುಟುಕು

  ಅಗಲಿಕೆ ಅಗಲಿಕೆಯು  ಮನದ ವ್ಯಾಧಿಯ ಹುಟ್ಟು ನೆನಪುಗಳು ಕಾಡುವ ಕಗ್ಗತ್ತಲ  ನಡುವಿಟ್ಟು., ಬಂಧಗಳ ನಡುವೆ ಕಾಣದ ಛಾಯೆಯಂತರ ಒಲವ ನೆಲೆಗೆ ಇರುಳು ಕವಿದ ನೋವಿನ ಹಂದರ.. ಸಿದ್ದುಮೂರ್ತಿ,

ಚುಟುಕು

 ಪ್ರೇಮ ಪರ್ವ ಪ್ರೀತಿ ಒಡಲು ಮಧುರ ಭಾವಗಳ ಇಂಪು ಬೆಸೆದ ಒಲವುಗಳು ಬಿರಿದ ಮಲ್ಲಿಗೆಯ ಕಂಪು ಪ್ರಣಯ ತಳೆದ ಒಲವಿನನುರಾಗ ಸ್ಪರ್ಶ ಬಾಳ ಮುನ್ನುಡಿಗೆ ಶುಭಾರಂಭ,ಈ ಪ್ರೇಮಪರ್ವ -ಸಿದ್ದು ಮೂರ್ತಿ

ಕಲಾ ಕೀರ್ತಿ ಪ್ರಶಸ್ತಿ

Image
 

ವಚನ

 ಆಧುನಿಕ ವಚನ ************ ಶೀರ್ಷಿಕೆ-ಔದಾರ್ಯ ************** ನೊಂದವರ ಬಾಳಲ್ಲಿ ತಾನೊಂದು ಬೆಳಕಾಗಿ ಬವಣೆಯ ಬದಕಿನಲಿ ಸೋತವರಿಗೆ ಹೆಗಲಾಗಿ ಹಸಿವು ನೀಗಿಸಿ, ಬದುಕಿಗೆ ಭರವಸೆಯಾಗಲು, ಮೌಲ್ಯದ ನೆಲೆಯಲ್ಲಿ ಕಂಡ‌ ಔದಾರ್ಯವಯ್ಯ.! ಪರರ ಒಳಿತು ಬಯಸಿ,ಮನಜನಾಗೆಂದ ಮಾಲತೇಶ..! ಸಿದ್ದು ಮೂರ್ತಿ

ಇರುಳ ಪರದೆ( ಕವಿತೆ)

Image
 ಇರುಳ ಪರದೆ *********** ಇರುಳ ಪರದೆಯ ಮಬ್ಬು ಬೆಳಕಿನಲಿ, ಕರಗದ ನೋವ ಸರಣಿಗಳು ಕಂಗಳಲಿ. ಹೊದ್ದ ದುಗುಡಗಳು, ಹೊತ್ತ ಕಳೆಯ ಬಿಡವು ಉರುಳದ ಕಾಲದಿ ಬೀಡು ಬಿಟ್ಟಂತೆ  ಬದುಕು. ತಂಪು ಹೂಡದ ಇರುಳು,ಬಸಿದು ಬಿಟ್ಟ ನಿಟ್ಟುಸಿರು, ಇಳಿದ ಬೇಸರದ ಬಿಳುಲುಗಳೇ ಮನವ ಬಳಸಿರಲು. ಭರವಸೆಯ ಬೆಳಕಿನುದಯ ಬಯಸಲು ನಿತ್ಯ, ಭಯದ  ಇರುಳ ಛಾಯೆ ಕಾಡಿರುವುದಿಲ್ಲಿ ಸತ್ಯ. ಮೌನದ ಸೆರಗಿನೊಳಗೆ ಸರಿದ ಮಾತುಗಳು, ನೋವಿನ ಹಂದರಕೆ  ಜೋತಿದ ಕನಸುಗಳು. ಉಸಿರುರುಸಿರು ಪರಿತಪಿಸಿದೆ ಜೀವದ ಜೀವನ ನೆನೆದು ಉಸಿರೊತ್ತ ತಂಗಾಳಿ ತಂಪು ಹೂಡುವ ದಿನಗಳೆಂದು.? ಸಾಲು ಸೋಲುಗಳು, ಗೆಲ್ಲವ ಕನಸುಗಳ ಘೋರಿಯು ಮಿಣುಕು ದೀಪದ ಭರವಸೆಯ ಜಾಡೂ,ಮಾಯವು.. ಮನದ ನೆಮ್ಮದಿಯ ಸುಡುವ ಕಿಡಿಗಳು ಆರಿ, ತಣಿದು ಇರುಳನು ಸರಿಸಿದ ಹೊನ್ನ ಬೆಳಕು ಇಣುಕುವುದೆಂದು.!? --ಸಿದ್ದುಮೂರ್ತಿ.ತುಮಕೂರು.

ಜೀವನೋತ್ಸಾಹ

ಜೀವನೋತ್ಸಾಹ ********************** ಛಲದ ಒಲವಿನಲಿ,ನಗುವ ಮನವಿದೆ ಬತ್ತದ ಒರತೆಯಂತೆ, ಉತ್ಸಾಹ ಜಿನುಗಿದೆ ನಿಷ್ಠೆಯೊಳಗಿನ ಕಾಯಕ ತನುವ ತಣಿಸಿದೆ. ಯಾರ ಹಂಗೇಕೆ.?ನಂಬಿಕೆಯ ನೆಲೆಯೊಳಗೆ ಇಂಬಾದ ಪಯಣ ಬದುಕಿನ ಗುರಿಯೆಡೆಗೆ ಚೊಕ್ಕ ಜೀವನದ,ಚಿಕ್ಕ ಹಂಬಲ ನೆಮ್ಮದಿಯೆಡೆಗೆ. ಹಮ್ಮು ಬಿಮ್ಮಗಳಿಲ್ಲದ  ತುಂಬು ಮನದೊಳು ಪ್ರೀತಿಯೊಲುಮೆಯರಳಿ  ಸದಾ ನಗುತಿರಲು ಅಂಜುವ ಎದೆಯ ಸುಳಿವೆಲ್ಲಿ, ಧೈರ್ಯವಿರಲು. ಇರುವುದೆರೆಡೆಗೆ  ಸದಾ ತೃಪ್ತಿಯ ಹೊಂದಿರಲು ಶುದ್ದ ಕರ್ಮಗಳಲ್ಲಿ ಸಿದ್ದಿಯೊಂದು ಕಾದಿರಲು ನಿಸ್ವಾರ್ಥ ಸೇವೆಯೋ,ಬದುಕ ಕೈಹಿಡಿದು ನಡೆಸಿದೆ.. ಸುಡುವ ಮತ್ಸರಗಳೇಕೆ,ತಂಪೂಡುವ ಸಹಜೀವನ ತಂಬೆಲರ ಸೊಗಸಿನಂತೆ ಬದುಕ,ಬಂಧಗಳ ಬೆಸೆದು ಬೆಳಗುವ ಹೊಂಗಿರಣ ಜೀವನದ ಬೆಳಕಾಗಿಸಲು.. ಮೋಹದ  ಮಾಯೆಯ ಗೆಲ್ಲುವ   ಮನವಿರಲು ಆಸೆಯ ಬಲೆಗೆ ಬಲಿಯಾಗದೆ, ಬಲಗೊಂಡಿದೆ ಸದೃಢ ಮನವೊಂದು  ನೆಮ್ಮದಿಯ ಮಹಲಿನಲಿ .. --ಸಿದ್ದು ಮೂರ್ತಿ, 

ಕವಿತೆ

******************** ಚಿತ್ರ ಕವನ ಸ್ಪರ್ಧೆ ************* ಶೀರ್ಷಿಕೆ-ಹಸಿರು ನಮ್ಮ ಉಸಿರು ************************* ಹಸಿರುಸಿರಲಿ ಜೀವಕೆ ಉಸಿರುದುಂಬಿದ ಮಡಿಲು ಹಸಿವ ತಣಿಸುತ ಬೆಳೆಸುವ ಕಾಳಜಿಯ ಒಡಲು ಧಮನಿಯೊಲಮೆ ಬಸಿದ ಎದೆಯ ಸುಧೆಯು ನಿತ್ಯ ಸಲಹುವ ಧರೆಯ ಹಸಿರು ವನಸಿರಿಯು., ಚಿಗುರು ನಳನಳಿಸಿ ನಗಲು, ಹೊಮ್ಮುವ ಚೇತನ ಹಸಿರುಟ್ಟ ಧರೆಯ ಸೊಬಗು ಚೆಲ್ಲಿದ ಆನಂದದೌತಣ ಒಡಲ ಮಮತೆಯ ಮಡಿಲೊಳಗೆ ಸುಖದ ತಾಣ ಹಸಿರೊಡಲಲಿ ಬೆಸೆದ ನಮ್ಮಬದುಕು,ಸುಂದರ ಕಾಣಾ. ಹಸಿರ ಒಡಲಿನುಸಿರ ಹಿಂಡುವ ನೀಚ ಮನಗಳ ದಂಡು ತಾನುಂಡು, ನೆರಳ ನೀಡುವ ಹಸಿರ ಬಸಿರನು ಕೊಂದು ಮೆರೆವ ಮನುಜನ ಸ್ವಾರ್ಥ, ವಿಕೃತ ಮನಗಳ ಅನರ್ಥ ಬದುಕು ನೀಡಿದ ವನಸಿರಿಯ ಬದುಕಿಂದು ಬರಡು., ಎಲೆ ಎಲೆಯ ಕಂಪನದಿ, ಸುಳಿವಗಾಳಿಯ ತಂಪಿನಲಿ ಧರಣಿ ಹಸಿರ ಉಸಿರು ಉಳಿಯಲಿ,ಕಾಳಜಿ ಬೆಳೆಯಲಿ ಹಸಿರು ಜೀವಗಳ ಉಸಿರು ಉಳಿಸುವ ಗುರಿಯೊಂದು ನಮ್ಮ ಬದುಕ ನೆಲೆಯಾಗಿ ಸಾಗಲಿ ದಿಟ್ಟ ಹೆಜ್ಜೆಗಳ ಇಟ್ಟು.. -ಸಿದ್ದುಮೂರ್ತಿ

ಪ್ರಶಸ್ತಿ

Image
 ವಾಯ್ಸ್ ಆಫ್ ಪಬ್ಲಿಕ್ ಇಸಂ ಕವನ ಸ್ಪರ್ಧೆಯ ಪ್ರಶಸ್ತಿ ಪತ್ರ

ಪ್ರಶಸ್ತಿ

Image
 

ಕವಿತೆ

  ಇರುಳ ಪರದೆಯ ಮಬ್ಬು ಬೆಳಕಿನಲಿ ಕರಗದ ನೋವ ಸರಣಿಗಳು ಕಂಗಳಲಿ ಹೊದ್ದ ದುಗುಡಗಳು, ಹೊತ್ತ ಕಳೆಯ ಬಿಡವು ಉರುಳದ ಕಾಲದಿ ಬೀಡು ಬಿಟ್ಟಂತೆ  ಬದುಕು. ತಂಪ ಹೂಡದ ಇರುಳು,ಬಸಿದು ಬಿಟ್ಟ ನಿಟ್ಟುಸಿರು, ಇಳಿದ ಬೇಸರದ ಬಿಳುಲುಗಳೇ ಮನವ ಬಳಸಿರಲು. ಭರವಸೆಯ ಬೆಳಕಿನುದಯ ಬಯಸಲು ನಿತ್ಯ, ಕಾಡುವ ಇರುಳ ಛಾಯೆ ಕಾಡಿರುವುದಿಲ್ಲಿ ಸತ್ಯ. ಮೌನದ ಸೆರಗಿನೊಳಗೆ ಸರಿದ ಮಾತುಗಳು, ನೋವಿನ ಹಂದರಕೆ  ಜೋತಿದ ಕನಸುಗಳು. ಆಸೆಯ ಅಲೆಗಳ ತೀರವ ಸಾಗಿ ಸೇರುವುದೆಂತು? ಇರುಳ ಸರಿಸಿದ ಹೊನ್ನ ಬೆಳಕು ಇಣುಕುವುದೆಂದು.! --ಸಿದ್ದುಮೂರ್ತಿ.

ಕವಿತೆ

 ಶೀರ್ಷಿಕೆ-ಹಸಿರು ನಮ್ಮ ಉಸಿರು ************************* ಹಸಿರುಸಿರಲಿ ಜೀವಕೆ ಉಸಿರುದುಂಬಿದ ಮಡಿಲು ಹಸಿವ ತಣಿಸುತ ಬೆಳೆಸುವ ಕಾಳಜಿಯ ಒಡಲು ಧಮನಿಯೊಲಮೆ ಬಸಿದ ಎದೆಯ ಸುಧೆಯು ನಿತ್ಯ ಸಲಹುವ ಧರೆಯ ಹಸಿರು ವನಸಿರಿಯು., ಚಿಗುರು ನಳನಳಿಸಿ ನಗಲು, ಹೊಮ್ಮುವ ಚೇತನ ಹಸಿರುಟ್ಟ ಧರೆಯ ಸೊಬಗು ಚೆಲ್ಲಿದ ಆನಂದದೌತಣ ಒಡಲ ಮಮತೆಯ ಮಡಿಲೊಳಗೆ ಸುಖದ ತಾಣ ಹಸಿರೊಡಲಲಿ ಬೆಸೆದ ನಮ್ಮಬದುಕು,ಸುಂದರ ಕಾಣಾ. ಹಸಿರ ಒಡಲಿನುಸಿರ ಹಿಂಡುವ ನೀಚ ಮನಗಳ ದಂಡು ತಾನುಂಡು, ನೆರಳ ನೀಡುವ ಹಸಿರ ಬಸಿರನು ಕೊಂದು ಮೆರೆವ ಮನುಜನ ಸ್ವಾರ್ಥ, ವಿಕೃತ ಮನಗಳ ಅನರ್ಥ ಬದುಕು ನೀಡಿದ ವನಸಿರಿಯ ಬದುಕಿಂದು ಬರಡು., ಎಲೆ ಎಲೆಯ ಕಂಪನದಿ, ಸುಳಿವಗಾಳಿಯ ತಂಪಿನಲಿ ಧರಣಿ ಹಸಿರ ಉಸಿರು ಉಳಿಯಲಿ,ಕಾಳಜಿ ಬೆಳೆಯಲಿ ಹಸಿರು ಜೀವಗಳ ಉಸಿರು ಉಳಿಸುವ ಗುರಿಯೊಂದು ನಮ್ಮ ಬದುಕ ನೆಲೆಯಾಗಿ ಸಾಗಲಿ ದಿಟ್ಟ ಹೆಜ್ಜೆಗಳ ಇಟ್ಟು.. -ಸಿದ್ದುಮೂರ್ತಿ

ಮನದ ಮಹಲು

 ಶೀರ್ಷಿಕೆ-ಮನದ ಮಹಲು ****************** ಮನದ ಮಹಲಿನಲಿ ಮಧುರ ಕನಸುಗಳು, ಮೋಹಕ ಮಿಡಿತದ ಸುಂದರ ಬಯಕೆಗಳು. ಎದೆಯ ತವಕಗಳು ಆಸೆಯಲೆಗಳ  ಕೂಡಿ, ಮನದ ಪುಳಕಗಳು ಕಣ್ಣ ಕನಸುಗಳ ಕಾಡಿ. ಒಲವು ಬೆಸೆದ ಗೆಲುವಿನಲಿ ತಂಪು ತಣಿವು, ಬೆಸುಗೆ ಹಾಕಿದ‌ ಒಲವಿನಲಿ  ಕಂಡ  ನಲಿವು. ಹೆಜ್ಜೆಹೆಜ್ಜೆಗೂ ಸದ್ದುಮಾಡಿದೆ ಸ್ಪರ್ಶಸುಳಿವು, ಸಜ್ಜುಗೊಂಡ ಒಲವಿನೆದೆಯ ಪ್ರೀತಿಹೊಳಪು. ಕಲ್ಪನೆಯ ಕಡಲಲ್ಲಿ ಮಿಂದ ಭಾವ ಹೂವಾಗಿ, ಅರಳಿದೊಲವ ಕಂಪು, ಸೊಗಸಿನ ಬದುಕಾಗಿ, ಕನಸ ಸೂರಿನಡಿ ಬೆಸೆದ ಅನುರಾಗ ಅರಳಿತು. ನನಸಿನ ಮಹಲ,ಒಲವಿನ ಹೃದಯ ಅರಳಿತು. -ಸಿದ್ದುಮೂರ್ತಿ.

ಪ್ರಬಂಧ

 ಕೊರೋನ ಕಿರುಪ್ರಬಂಧ ಸ್ಪರ್ಧೆ ******************** ಕೊರೋನ 2ನೆ ಅಲೆಯ ಲಾಕ್ಡೌನ್ ಸಮಯದಲ್ಲಿ ಸರ್ಕಾರ ಹಾಗು ಜನಸಾಮಾನ್ಯರ ಸಾಮಾಜಿಕ ಜವಾಬ್ದಾರಿಗಳು" ಮೊನ್ನೆಯಷ್ಟೇ ವ್ಯಾಪಾರದಲ್ಲಿ ಚೇತರಿಕೆಯನ್ನು ಕಂಡಿದ್ದ ರಾಘವನಿಗೆ, ಈಗ ಮತ್ತದೇ ಎರಡನೇ ಅಲೆಯ ಕರೋನಾದ ಕಾರಣಕ್ಕೆ ಹೇರಿದ ಜನತಾ ಕರ್ಫ್ಯೂ ನಿಂದ ದಿಗಿಲು ಹುಟ್ಟಿಸಿದೆ...ಉರಿವ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಅವನ ಬದುಕಿನಲ್ಲಿ ನೋವಿನ ಮೇಲೆ ನೋವು ಅಣಿಯಾಗುತ್ತಿರುವುದು, ಊಹಿಸಲಾರದಷ್ಟು ಯಾತನೆಗಳ ಸರಮಾಲೆಯ ಹೊದ್ದು ನರಳಿಸುವಂತೆ ಮಾಡುವುದಂತೂ ಖಚಿತ... ಇದು ಕೇವಲ ರಾಘವನ ಬದುಕಿನಲ್ಲಷ್ಟೇ ಅಲ್ಲ ಎಲ್ಲರ ಬದುಕಿನಲ್ಲೂ ಹಾಗೆ ನೋವಿನ ಸರಣಿ ಹೆಣೆದ ಕಥೆಯಂತೆ ಮುಂದುವರೆದ ಭಾಗವಾಗುವುದು. ಅಸಹನೀಯ ನೋವುಗಳು, ಕಾಡುವ ಭಯದ ಪರಿ ನಿತ್ಯವೂ ಅನುರಣಿಸತೊಡಗಲಿದೆ.....ಮೊದಲನೇ ಅಲೆಗಿಂತಲೂ ಈಗಿನ ಕರೋನಾ ರೂಪಾಂತರಿಯಾಗಿ ಸಿಕ್ಕ ಸಿಕ್ಕಲ್ಲಿ ನುಗ್ಗಿ,ಪ್ರಾಣ ಹರಣ ಮಾಡುತ್ತಿರುವುದು ನಮ್ಮ ಕಣ್ಣಿಗೆ ಕಟ್ಟಿದಂತಿದೆ., ದೃಶ್ಯ ಮಾಧ್ಯಮಗಳ ಸುದ್ದಿ ಪ್ರಸಾರಗಳು ದಂಗು ಬಡಿಸುವ ಧಾರುಣ ಸುದ್ದಿಗಳು ಎಲ್ಲರ ಮನೆ ಮನಗಳಿಗೂ ಇಂದು ಭೋರ್ಗರೆಯುತ್ತಿದೆ. ನಿಧಾನವಾಗಿ ಮರೆಯಾಗುತ್ತಿದ್ದ ಕರೋನಾ ಮತ್ತೆ ವ್ಯಾಪಕವಾಗಿ ಹರಡಲು ಕಾರಣರು ಯಾರು..? ಎಂದು ಒಮ್ಮೆ ನಮ್ಮನ್ನು ಅವಲೋಕಿಸಿದಾಗ ಸಿಗುವ ಉತ್ತರ ಅದು ನಾವುಗಳೇ...!!! ನಮ್ಮ ದಿವ್ಯ ನಿರ್ಲಕ್ಷ್ಯ , ಬೇಜವಾಬ್ದಾರಿ ನಡವಳಿಕೆಗಳು...!!!ಸಾರಾ ಸಗಟಾಗಿ ಕರೋನ ಇಲ್ಲ ಎಂ...

ಮೌನದ ಮರೆಯಲ್ಲಿ

 ಶೀರ್ಷಿಕೆ-ಮೌನದ ಮರೆಯಲ್ಲಿ ******************** ಮನದ ಮಾತುಗಳು ಮೌನದ ಸೆರಗಿನ ಮರೆಯಲಿ ಸುಳಿವ ನೆನಪುಗಳ ಬೆಸೆದ ಇರುಳು  ಬೆಳಕಾಗಿ ಅರಳಿದ ಒಲವು ಕಂಪು ಸೂಸಲು ಹಿತವಾಗಿ ಒಲುಮೆಯ ಒರತೆಯು ಹೊಮ್ಮಿದೆ ನವಿರಾಗಿ ಮನದೊಳಗಿನ ಬಯಕೆಯು ಹೊಳೆವ ಮುತ್ತಂತೆ ರವಿಯು ಬೆಳಕು ಚೆಲ್ಲಿ ಧರಣಿಯು ಹೊಳಯುವಂತೆ ಇರುಳ ಶಶಿಯು ಹೂಡಿದ ಹಾಲು ಬೆಳದಿಂಗಳಂತೆ ಒಲವಿನ ಬೆಳಕ ಹೂಡಿ ರಮಿಸುವೆ ನಿನ್ನ, ಮನದನ್ನೆ ತಿರುಗಿ ನೋಡು ಒಮ್ಮೆ ಕೊಂಕು ಬಿಂಕವ ತೊರೆದು  ಮಿನುಗು ತಾರೆಗಳ ಹೆಕ್ಕಿ ಹೊಳಪ ಧಾರೆ ಎರೆವೆ ಕಡಲ ಮುತ್ತುಗಳ ಹೆಕ್ಕಿ ಮುತ್ತಿನ ಮಾಲೆ ಕೊಡುವೆ ಮೌನ ತೊರೆದು ಮನದ ಮಾತ ಹೇಳು ನನ್ನೊಲವೆ ಮನದ ಮೆಚ್ಚುಗೆಯು ನೀನು, ಇಚ್ಚೆಗಳ ಬೆಸೆದು ಹೊಸತು ಬದುಕಿಗೆ ಒಲವ ಮುನ್ನುಡಿಯ ಬರೆದು ಸನಿಹವಾಗು ಹೃದಯಕೆ ,ಮೌನ ರೂಪವ ಕಳೆದು ಒಲವಿನೆದೆಯಲಿ ಸದಾ ನಲಿವ ಒಲುಮೆಯ ತಳೆದು ಸಿದ್ದು ಮೂರ್ತಿ, ತುಮಕೂರು

ವ್ಯರ್ಥ ಬದುಕು

 ವ್ಯರ್ಥ ಬದುಕು ********** ವ್ಯರ್ಥ ಬದುಕು ************** ಸಾಲು ಸಾಲು ಸೋಲುಗಳು ಗೆದ್ದೆಂದು  ಬೀಗುವ ಕನಸುಗಳು ನಿದ್ದೆ ಗೆಡಿಸಿದ ದಿನಗಳು ಉಳಿದು ಹೋದವು  ಬೀಡು ಬಿಟ್ಟ ವ್ಯಥೆಯ ವ್ಯರ್ಥ ಬದುಕಿನಲ್ಲಿ... ಬೆಳಕು ನಂದಿದ ಕತ್ತಲು ಕಾಡು ಭರವಸೆಯ ಮಿಣುಕು ಹುಳದ  ಜಾಡುಹಿಡಿದು ನಡೆದರೂ, ಉಳಿದ ನಿಟ್ಟುಸಿರು ಬೀಡು ಬಿಟ್ಟ ಬೇಸರದ ಬದುಕಿನಲ್ಲಿ... ದೇಹ ದಂಡಿಸಿದ ಶ್ರಮ ಬಸಿದ ರಕ್ತದ ಬೆವರಹನಿ ಮೊಳೆತು ಫಲವಾಗದ ಭ್ರೂಣ ಕಳೆದು ಹುಸಿಯಾಗಿದೆ ಕುಸಿದ ಬಿದ್ದ ದೇಹದ ನಿತ್ರಾಣ ಬೀಡು ಬಿಟ್ಟ ಯಾತನೆಯ ಬದುಕಿನಲ್ಲಿ... ಅರಿವ ಬೆಳಕಿನ ಬೀಜ ಬಿತ್ತಲು ಸಾರತೆಯ ಕೊರತೆಗೆ ಕರಗಿ ನೀರಾಗಿ ಹರಿದಿದೆ ಜ್ಞಾನದ ಬೆಳಕೊಂದು ಚದುರಿಯೂ ಚೆಲುವ ಕಾಣದಾಗಿದೆ., ಬೀಡು ಬಿಟ್ಟ ಅಜ್ಞಾನದ ನೆಲೆಯ ಬದುಕಿನಲ್ಲಿ.. ತನ್ನೊಳಗಿನ ಅರಿವಿನ ಗರ್ಭದಲ್ಲಿ ಜನಿಸದ ಜಗದ ಒಳಿತಿನ ಗುಣ ತಾನು ತಾನೆಂದು ಬೀಗಿ ಬಯಕೆಯ ಬೇಲಿಯೊಳಗೆ ಬಂಧಿಯಾಗಿ, ಅಂಧನಾಗಿ ವಿಕೃತಗಳ ಕರ್ಮಗಳಿಗೆ ಬದುಕು ಶಿಕ್ಷೆಯ ಕೂಪದೊಳಗೆ ನಲುಗುತ್ತಿದೆ.. ಸಿದ್ದು ಮೂರ್ತಿ,ತುಮಕೂರು

ಪ್ರಶಸ್ತಿ

Image