Posts

Showing posts from August 9, 2020

ಗುರು ಸಾಕ್ಷಾತ್ ಪರಬ್ರಹ್ಮ

 ಗುರು ಸಾಕ್ಷಾತ್ ಪರಬ್ರಹ್ಮ ----------------------------  ಸಣ್ಣ ಹಳ್ಳಿಯ ಕನ್ನಡ ಶಾಲೆ ಯಲ್ಲಿ ಕಲಿತು ಜಿಲ್ಲಾಧಿಕಾರಿಯಾಗಿ ಹಳ್ಳಿಗೆ ಹೆಮ್ಮೆಯಾಗಿದ್ದ ಪ್ರವೀಣನನ್ನು ಊರಿನ ಎಲ್ಲಾ ಮುಖ್ಯಸ್ಥರು ಸೇರಿ ಸನ್ಮಾನಿಸಲು,ವೇದಿಕೆಯ ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ಏನೋ ಅರಿತಂತವನಾಗಿ ಪ್ರವೀಣ ಖುರ್ಚಿ ಯಿಂದೆದ್ದು ವೇದಿಕೆಯ ಮುಂಬಾಗದಲ್ಲಿ ಊರುಗೋಲಿಡಿದು ಕುಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರನ್ನು  ತೋಳಿಡಿದು ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ನಂತರ ತನ್ನೆಲ್ಲ ಸನ್ಮಾನ ಪರಿಕರಗಳನ್ನು ಅವರ ಚರಣಗಳಿಗರ್ಪಿಸಿ,ಹೇಳುತ್ತಾ "ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ನಿರ್ದೇಶಕರಂತೆ ಜೀವನದ ಗುರಿಯನ್ನು ತಲುಪಲು ಸಹಾಯ ಮಾಡಿದ ಗುರುಗಳು ನಮ್ಮ ಶ್ಯಾಮಣ್ಣ ಮಾಸ್ತರು... ಹಾಗಾಗಿ ನನ್ನೆಲ್ಲ ಸನ್ಮಾನ ಗಳು ಗುರುಗಳ ಚರಣಗಳಿಗರ್ಪಣೆ"..!.ಎಂದಾಗ ಮಾಸ್ತರರ ಕಣ್ಣಾಲಿ ತುಂಬಿದ್ದವು .,ಸಭೆಯ ಕರತಾಡನ ಮುಗಿಲು ಮುಟ್ಟಿತ್ತು.. ಸಿದ್ದು ಮೂರ್ತಿ, 

ಶಾಯರಿಗಳು

**************** ವಿಷಯ: ಶಾಯರಿ """""""""""""" ------------------------------- ಶಾಯರಿ ೧: ಧರ್ಮದ ಬೆಳಕು -------------------------------- ಜಗದ ಧರ್ಮಗಳು ಸಾರುವ ನೀತಿಯೂ ಒಂದೇ ಸಕಲ ಧರ್ಮಗಳ  ಬದುಕಿನ ದಾರಿಯೂ ಒಂದೇ ಅರಿತವರೇ ನಡೆಯುವರು ಜಾತಿಯ ದಾರಿ ಹಿಡಿದು ಧರ್ಮ ತೋರುವ ದೇವನೊಲಿಸುವ ದಾರಿ ತೊರೆದು ------------------- ಶಾಯರಿ ೨: ಶ್ರಮ ------------------- ಕನಸುಗಳು ನನಸಾಗಿಸುವಂತ ಶ್ರಮವಿರಲಿ ಶ್ರಮದ ಬದುಕಲ್ಲಿ ನಮ್ಮ ಒಲವಿರಲಿ ಒಲವಿನ ಬದುಕಲ್ಲಿ ನಮ್ಮ ವಿಶ್ವಾಸವಿರಲಿ ವಿಶ್ವಾಸದ ಬದುಕಲ್ಲಿ ನಿರೀಕ್ಷಿಸಿದ ಫಲ ನಮ್ಮದಾಗಲಿ. -ಸಿದ್ದು ಮೂರ್ತಿ, ತುಮಕೂರು.

ವಾರದ ಸ್ಪರ್ಧೆ

Image
 ವಾರದ ಸ್ಪರ್ಧೆ" ಶಾಯರಿ "ಯಲ್ಲಿ ಅತ್ಯುತ್ತಮ ಸ್ಥಾನ