ಕರೋನಾ ಸಮಯದ ಸ್ವಾತಂತ್ರ್ಯೋತ್ಸವ ಶೀರ್ಷಿಕೆ: ಏನೇ ಬರಲಿ ಒಗ್ಗಟ್ಟಿರಲಿ...!! """""""""""""""""""""""""""" ನಮ್ಮ ಭಾರತ ವೈವಿದ್ಯತೆಯಿಂದ ಕೂಡಿದರೂ ಏಕತೆಯಿಂದ ಮೆರೆವ ಅಭಿವೃದ್ಧಿ ಶೀಲ ರಾಷ್ಟ್ರ..,ಹಲವು ಧರ್ಮಗಳ ನೆಲೆಯಾದ ಸುಸಂಸ್ಕೃತ ರಾಷ್ಟ್ರ., ವೈಶಿಷ್ಟ್ಯ ಪೂರ್ಣ ಭೌಗೋಳಿಕ ಲಕ್ಷಣಗಳು, ಪ್ರಾಕೃತಿಕ ಸಂಪನ್ಮೂಲಗಳ ಹೊಂದಿದ ರಾಷ್ಟ್ರ. ಭಿನ್ನ ವಿಭಿನ್ನ ವಾದ ಪದ್ದತಿ,ಆಚರಣೆ, ಭಾಷೆ, ಸಂಪ್ರದಾಯ, ಉಡುಪು ಗಳಿದ್ದರೂ ನಾವೆಲ್ಲರೂ ಭಾರತೀಯರೆಂಬ ಸಹೃದಯ ಏಕತಾ ಮನೋಭಾವವನ್ನು ಬೇರೆ ಯಾವ ರಾಷ್ಟ್ರದೊಂದಿಗೆ ಹೋಲಿಕೆ ಮಾಡುವುದು ಅಸಾಧ್ಯ.... ಇಂತಹ ದೇಶ ಈ ಮೊದಲು ಬ್ರಿಟೀಷರ ಕಬಂಧ ಬಾಹುಗಳಿಂದ ನಲುಗಿ.,ದೇಶದ ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದ ಬ್ರಿಟೀಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ ಇಂದಿಗೆ 73 ವರ್ಷ ಗಳು ಸಂದಿವೆ ., ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ದೇಶದ ವೀರಪುರುಷರ ತ್ಯಾಗ ಬಲಿದಾನ ಗಳ ಸಂಕೇತದಂತೆ ಪ್ರತಿವರ್ಷ ಆಗಸ್ಟ್ 15ರಂದು ಆಚರಿಸುವ ಮಹಾಹಬ್ಬ ತನ್ನದೇ ಆದ ವೈಶಿಷ್ಟ್ಯ ತೆಹೊಂದಿದೆ.. ದೇಶಾಭಿಮಾನ ದೇಶಪ್ರೇಮ ದೇಶದೆಲ್ಲೆಡೆ ಸಾಮೂಹಿಕವಾಗಿ ಅಭಿವ್ಯಕ್ತವಾಗುವ ಆ ಸುಸಂದರ್ಭ ಅಭೂತಪೂರ್ವ ವಾದುದು... ಆದರೆ ಆಗಸ್ಟ್ 2020 ಈ ವರ್ಷ...