Posts

Showing posts from August 2, 2020

ಅಭಿನಂದನಾ ಪತ್ರ

Image
 

ಕರೋನಾ ಸಮಯದ ಸ್ವಾತಂತ್ರ್ಯೋತ್ಸವ

 ಕರೋನಾ ಸಮಯದ ಸ್ವಾತಂತ್ರ್ಯೋತ್ಸವ ಶೀರ್ಷಿಕೆ: ಏನೇ ಬರಲಿ ಒಗ್ಗಟ್ಟಿರಲಿ...!! """""""""""""""""""""""""""" ನಮ್ಮ ಭಾರತ ವೈವಿದ್ಯತೆಯಿಂದ ಕೂಡಿದರೂ ಏಕತೆಯಿಂದ ಮೆರೆವ ಅಭಿವೃದ್ಧಿ ಶೀಲ ರಾಷ್ಟ್ರ..,ಹಲವು ಧರ್ಮಗಳ ನೆಲೆಯಾದ ಸುಸಂಸ್ಕೃತ ರಾಷ್ಟ್ರ., ವೈಶಿಷ್ಟ್ಯ ಪೂರ್ಣ ಭೌಗೋಳಿಕ ಲಕ್ಷಣಗಳು, ಪ್ರಾಕೃತಿಕ ಸಂಪನ್ಮೂಲಗಳ ಹೊಂದಿದ ರಾಷ್ಟ್ರ. ಭಿನ್ನ ವಿಭಿನ್ನ ವಾದ ಪದ್ದತಿ,ಆಚರಣೆ, ಭಾಷೆ, ಸಂಪ್ರದಾಯ, ಉಡುಪು ಗಳಿದ್ದರೂ ನಾವೆಲ್ಲರೂ ಭಾರತೀಯರೆಂಬ ಸಹೃದಯ ಏಕತಾ ಮನೋಭಾವವನ್ನು ಬೇರೆ ಯಾವ ರಾಷ್ಟ್ರದೊಂದಿಗೆ ಹೋಲಿಕೆ ಮಾಡುವುದು ಅಸಾಧ್ಯ....   ಇಂತಹ ದೇಶ ಈ ಮೊದಲು ಬ್ರಿಟೀಷರ ಕಬಂಧ ಬಾಹುಗಳಿಂದ ನಲುಗಿ.,ದೇಶದ ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದ ಬ್ರಿಟೀಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ ಇಂದಿಗೆ 73 ವರ್ಷ ಗಳು ಸಂದಿವೆ .,  ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ದೇಶದ ವೀರಪುರುಷರ ತ್ಯಾಗ ಬಲಿದಾನ ಗಳ ಸಂಕೇತದಂತೆ ಪ್ರತಿವರ್ಷ ಆಗಸ್ಟ್ 15ರಂದು ಆಚರಿಸುವ  ಮಹಾಹಬ್ಬ ತನ್ನದೇ ಆದ ವೈಶಿಷ್ಟ್ಯ ತೆಹೊಂದಿದೆ.. ದೇಶಾಭಿಮಾನ ದೇಶಪ್ರೇಮ  ದೇಶದೆಲ್ಲೆಡೆ ಸಾಮೂಹಿಕವಾಗಿ ಅಭಿವ್ಯಕ್ತವಾಗುವ ಆ ಸುಸಂದರ್ಭ ಅಭೂತಪೂರ್ವ ವಾದುದು... ಆದರೆ ಆಗಸ್ಟ್ 2020  ಈ ವರ್ಷ...

ಹಾಸ್ಯ ಕತೆ

ಹಾಸ್ಯ ಕತೆ ಯಾವ ಲೈನು...?! ತಿಂಗಳುಗಳು ಕಳೆದರೂ ಶಾಲೆ ಆರಂಭ ವಾಗದಿದ್ದರೂ ತರಗತಿಗಳಂತೂ ಆರಂಭ ವಾದವು.ಅದೂ ಆನ್ಲೈನ್ ತರಗತಿಗಳು.. ಬರೋಬ್ಬರಿ ಮೂರ್ನಾಲ್ಕು ತಿಂಗಳಿಂದ ಮನೆಯೊಳಗೆ ಆಟೋಟಗಳಲ್ಲಿ ಮಗ್ನನಾಗಿದ್ದ ಗುಂಡು ಓದನ್ನೇ ಮರೆತಂತೆ,ಕೆಲವೊಂದು ಕಲಿತಿದ್ದು ನೆನೆಪಿಗೆ ಬಾರದೇ ಹೋಗಿದೆ... ಅಲ್ಲಿಗೂ ಎಚ್ಚೆತ್ತ ಸರ್ಕಾರ ಆನ್ಲೈನ್ ಶಿಕ್ಷಣ ನೀಡಲು ಶುರುಮಾಡ್ತು...!! ಟಿ.ವಿ.ಮೊಬೈಲ್ನಲ್ಲಿ ಗೇಮ್, ಚೋಟಾಭೀಮ್ ನೋಡುತ್ತಿದ್ದ ಗುಂಡನಿಗೆ ಟಿ.ವಿ.ಮೊಬೈಲ್ನಲ್ಲಿ ಪಾಠ ಅಂದ ತಕ್ಷಣ ಎಲ್ಲೋ ಒಂದ್ಕಡೆ ಗುಂಡನಿಗೆ ಭಯ ನಿರಾಶೆ.. ತರಗತಿಯಲ್ಲಿ ಪ್ರತಿಸಾರಿ ಪ್ರಶ್ನೆ ಕೇಳಿ ತಬ್ಬಿಬ್ಬು ಆಗಿ ಏಟು ತಿನ್ನುತ್ತಿದ್ದ ಗಣಿತ ಕ್ಲಾಸ್ನ ಮಿಸ್ ನೆನಪಾಯ್ತು ಗುಂಡನಿಗೆ.. ಇತ್ತ ಆಟದ ಕಡೆ ಗಮನ ಇಲ್ಲ ಓದಿನ ಕಡೆನೂ ಗಮನ ಇರದೇ ಗುಂಡನ ಮನೆ ಚಡಪಡಿಸ್ತು... ಅಷ್ಟರಲ್ಲಿ ಅವನಿಗೆ ಅವರಜ್ಜಿ ನೆನಪಾಗಿ ಅಜ್ಜಿ ಕಡೆ ಸಹಾಯ ತಗೆದುಕೊಂಡ್ರಾಯ್ತು ಅಂತ ಸಮಾಧಾನ ಪಟ್ಕೊಂಡ.. ಇತ್ತ ಅಜ್ಜಿಗೆ ಆನ್ಲೈನ್ ಪಾಠದ ಘಮಲು ಇಲ್ಲ ಗಂಧನೂ ಇಲ್ಲ..ಮಿಸ್ ಮನೆಗೆ ಬಂದು ಪಾಠ ಹೇಳ್ತಾರೆ ಅಂತ ತಿಳ್ಕೋಂಡಿದ್ದಾರೆ ಅಜ್ಜಿ... ಒಂದಿನ ಅಜ್ಜಿ ಬಂದು..ಏನೋ ಗುಂಡ ಈವತ್ತು ನಿಮ್ಮ ಮಿಸ್ ನಿನಗೆ ಪಾಠ ಮಾಡೋಕೆ ಮನೆಗೆ ಬರ್ತಾರಂತೆ ಹೌದಾ..?!!!  ಮನಸ್ಸಿನಲ್ಲಿ ಏನೋ ಯೋಚಿಸುತ್ತ ಗುಂಡ ಹೇಳ್ದಾ..."ಹೌದು ಅಜ್ಜಿ ನಮ್ಮ ಮನೆಗೆ ಮಿಸ್ ಬರ್ತಾರೆ ಅವರಿಗೆ ಏನಾದ್ರೂ ತಿಂಡಿ ಮಾಡಜ್ಜಿ.. ಅಂತ ಅಜ್ಜಿನ ಕುಸುಲಾಯಿಸಿ...

ಟಂಕಾ

********* ಟಂಕಾ-೧ ********** ಕರೋನ ದಾಳಿ ಜೀವನೆಲೆಗೆ ಹಾನಿ ದುಸ್ತರಗೊಂಡ ಬಾಳಿನ ನಿತ್ಯಗೋಳು ಇತ್ತ ನೆಮ್ಮದಿ ಹಾಳು ************* ಟಂಕಾ-೨ ************* ಸದಾ ನಾನೆಂಬ ಭಾವವು ಒಳಿತಲ್ಲ ನಮ್ಮವರೆಂದು ಬಾಳು ಜೊತೆಜೊತೆಗೆ ಬದುಕನ್ನು ಗೆಲ್ಲುವೆ ಸಿದ್ದು ಮೂರ್ತಿ, 

ಸಭ್ಯತೆ

ಸಭ್ಯತೆ (ನ್ಯಾನೋ ಕಥೆ) ರಾಜಪ್ಪ ಮತ್ತು ರಾಮಪ್ಪ ತಮ್ಮಿಬ್ಬರು ಮಕ್ಕಳೊಂದಿಗೆ ಒಂದು ಕಚ್ಚಾ ರಸ್ತೆ ಯಲ್ಲಿ ವಾಯುವಿಹಾರಕ್ಕೆಂದು ತೆರಳಿರುತ್ತಾರೆ. ಇಂಗ್ಲೀಷ್ ಶಾಲೆಯಲ್ಲಿ ಓದುತ್ತಿದ್ದ ರಾಮಪ್ಪ ತನ್ನ ಮಗನನ್ನು  ಹೊಗಳುತ್ತಾ ಶಾಲೆಯಲ್ಲಿ ಓದು  ಆಟಗಳೆಲ್ಲದರಲ್ಲಿ ನನ್ನ ಮಗ ಮುಂದು ಶಾಲೆ ನನ್ನ ಮಗನಿಗೆ ಎಲ್ಲಾ ಕಲಿಸುತ್ತದೆ ಎನ್ನುತ್ತಾನೆ..ಅಷ್ಟರಲ್ಲಿ ಮುದುಕನೊಬ್ಬ ನೀರು ನಿಂತ ರಸ್ತೆ ದಾಟಲಾಗದೆ ಜಾರಿ ಬೀಳುತ್ತಾನೆ.ಸಾಮಾನ್ಯ ಕನ್ನಡ ಶಾಲೆಯಲ್ಲಿ ಓದುತ್ತಿದ್ದರಾಜಪ್ಪನ ಮಗ ಓಡಿಬಂದು ಮುದುಕನನ್ನು  ಹಿಡಿದುಕೊಂಡು ನಿಧಾನವಾಗಿ ಮೇಲೇಳಲು ಸಹಾಯ ಮಾಡುತ್ತಾ ಕೈ,ಮತ್ತು ಬಟ್ಟೆಗಂಟಿದ ಮಣ್ಣನ್ನು ತನ್ನ ಕೈಯಿಂದ ಸ್ವಚ್ಚ ಗೊಳಿಸುತ್ತಾ ನಿಧಾನವಾಗಿ ಮುದುಕನನ್ನು ಸ್ವಲ್ಪ ದೂರದ ವರೆಗೆ ಕೈ ಹಿಡಿದು ನಡೆಸುತ್ತಾನೆ..ಇದನ್ನು ರಾಮಪ್ಪಮತ್ತು ಅವನ ಮಗ ಮೂಕವಿಸ್ಮಿತರಾಗಿ ನೋಡುತ್ತಾ ನಿಂತರು..!!!. ಓದಿನಲ್ಲಿ ಎಷ್ಟೇ ಮುಂದಿದ್ದರು ಸಭ್ಯತೆ ಕಲಿಸದ ಶಿಕ್ಷಣ ನಿಜಕ್ಕೂ ವ್ಯರ್ಥ., ಪರಿಪೂರ್ಣ ವಲ್ಲ ಸಿದ್ದು ಮೂರ್ತಿ..

ಟಂಕಾ

  ಸಂಘ ಸಂಘಜೀವಿಯ ಮಾನವ ಸಮಾಜದ ಸುಗಮಕಾರ ಕೂಡಿ ಬಾಳುವ ಇಚ್ಚೆ ಹೊರುವ ಸಮಭಾರ ಸಾಹಿತ್ಯ ಮನದ ಭಾವ ಅರಳಿದ ಸುಮವು ಪರಿಮಳವು ಚೆದುರಿ ಚೆಲ್ಲುವಂತೆ ಸಾಹಿತ್ಯ ಕುಸುಮವು ಸೇವೆ ನಿಸ್ವಾರ್ಥ ಸೇವೆ ನಮ್ಮ ಗುರಿಯಾಗಲಿ ಬದುಕಿನಲಿ ಇದು ನೀತಿಯಾಗಲಿ ಅರಿತು ನಡೆಯಲು ಶ್ರಮ ಶ್ರಮವಿಲ್ಲದೆ ಪಡೆವ ಜಯ ವ್ಯರ್ಥ ಫಲನಿರೀಕ್ಷೆ ಇಲ್ಲದ ಶ್ರಮಗಳ ಗೆಲುವು ನಿತ್ಯ ಸತ್ಯ ಸಿದ್ದುಮೂರ್ತಿ

ಪತ್ರಿಕೆ ಯಲ್ಲಿ ಪ್ರಕಟಗೊಂಡ ಬರಹ

Image

ಪತ್ರಿಕೆ ಯಲ್ಲಿ ಪ್ರಕಟಗೊಂಡ ಬರಹ

Image

ಚಿಂತನ ಬರಹ

Image

ನ್ಯಾನೋ ಕಥಾ ಸ್ಪರ್ಧೆ

Image

ಪ್ರಶಸ್ತಿ ಗೌರವಗಳು

Image

ಸೋದರ ವಾತ್ಸಲ್ಯ

Image

ಆಸೆಯ ಬಾಳು

ಆಸೆಯ ಬಾಳು ಈಡೇರದ ಆಸೆಗೆ ಬದುಕ ನೆಮ್ಮದಿ ಹಾಳು ಸುಖದ ಗೀಳಿಗೆ ಗಂಟು ಬಿದ್ದ ಬಾಳು ಆಸೆಯ ಬೆನ್ನೇರಿ ಓಡುವ ಗೀಳು ನಿಲುಕದ ಆಸೆಗಳು ಬದುಕಲಿ ತಂದಿಟ್ಟ ಗೋಳು..! ಸಿದ್ದುಮೂರ್ತಿ