Posts

Showing posts from August 16, 2020

ಗುರು ಸಾಕ್ಷಾತ್ ಪರಬ್ರಹ್ಮ

----------------------------------- ನ್ಯಾನೋ ಕಥಾ ಸ್ಪರ್ಧೆ ----------------------- ಗುರು ಸಾಕ್ಷಾತ್ ಪರಬ್ರಹ್ಮ ----------------------------  ಸಣ್ಣ ಹಳ್ಳಿಯ ಕನ್ನಡ ಶಾಲೆ ಯಲ್ಲಿ ಕಲಿತು ಜಿಲ್ಲಾಧಿಕಾರಿಯಾಗಿ ಹಳ್ಳಿಗೆ ಹೆಮ್ಮೆಯಾಗಿದ್ದ ಪ್ರವೀಣನನ್ನು ಊರಿನ ಎಲ್ಲಾ ಮುಖ್ಯಸ್ಥರು ಸೇರಿ ಸನ್ಮಾನಿಸಲು,ವೇದಿಕೆಯ ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ಏನೋ ಅರಿತಂತವನಾಗಿ ಪ್ರವೀಣ ಖುರ್ಚಿ ಯಿಂದೆದ್ದು ವೇದಿಕೆಯ ಮುಂಬಾಗದಲ್ಲಿ ಊರುಗೋಲಿಡಿದು ಕುಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರನ್ನು  ತೋಳಿಡಿದು ಸನ್ಮಾನ ಖುರ್ಚಿಯ ಮೇಲೆ ಕುಳ್ಳಿರಿಸಿದರು.ನಂತರ ತನ್ನೆಲ್ಲ ಸನ್ಮಾನ ಪರಿಕರಗಳನ್ನು ಅವರ ಚರಣಗಳಿಗರ್ಪಿಸಿ,ಹೇಳುತ್ತಾ "ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ನಿರ್ದೇಶಕರಂತೆ ಜೀವನದ ಗುರಿಯನ್ನು ತಲುಪಲು ಸಹಾಯ ಮಾಡಿದ ಗುರುಗಳು ನಮ್ಮ ಶ್ಯಾಮಣ್ಣ ಮಾಸ್ತರು... ಹಾಗಾಗಿ ನನ್ನೆಲ್ಲ ಸನ್ಮಾನ ಗಳು ಗುರುಗಳ ಚರಣಗಳಿಗರ್ಪಣೆ"..!.ಎಂದಾಗ ಮಾಸ್ತರರ ಕಣ್ಣಾಲಿ ತುಂಬಿದ್ದವು .,ಸಭೆಯ ಕರತಾಡನ ಮುಗಿಲು ಮುಟ್ಟಿತ್ತು.. ಸಿದ್ದು ಮೂರ್ತಿ, 

ಬಿಕ್ಕುವ ದನಿ

  ------------------ ಶೀರ್ಷಿಕೆ:ಬಿಕ್ಕುವ ದನಿ ************** ಬಿಕ್ಕುವ ದನಿ ಮಡುಗಟ್ಟಿದೆ ಮಾತಾಗದೆ ಎದೆಭಾಷೆಗೆ ದನಿಗೂಡದೆ ಮೌನ ತಾಳಿದೆ ಮಬ್ಬರಿದು ಬೆಳಕು ಹರಿಯುವ ಮುನ್ನ ದುರುಳರ ಕ್ರೂರದಂಡಿಗೆ ಪಥನ ಗೊಂಡಿದೆ ಮನ ಅಮಲು ಏರಿದ  ಕರಗಳ ತೆಕ್ಕೆಯೊಳು ನಶೆಯ  ಗುಂಗಿನ ಹೊಳಪು  ನಮ್ಮಬದುಕ ಕನಸುಗಳ ಗದ್ದಗೆಯೇರಿ ಹೊಂಚು ಆಸೆಗಳೇ  ಗಹಗಹಿಸುತ್ತಿವೆ ಕನಸುಕಾಣುವ ಮುನ್ನ ಆಸೆಹುಟ್ಟುವ ಮುನ್ನ ಬದುಕ ಮುನ್ನುಡಿ ಬರೆವ ಹೊತ್ತಿಗೆಯಲ್ಲಿ ರಕ್ಕಸ ಮನಗಳ ಕ್ರೂರ ಕಾಮನೆಯ ಗೀಚಿ ಬೆತ್ತಲಾಗಿಸಿದ ನಮ್ಮ ಬದುಕು ಕ್ಷಣದಲಿ ಮರೆಮಾಚಿ ಮಿಕ್ಕಿ ಮಿಗಿಲಾಗಿ ಉಂಡು ತೇಗುವಕಾಮನೆ ನಮ್ಮ ಬದುಕ ತುಳಿತದ‌ ಯಾತನೆ ಉಸಿರಾಡಲು ಮಾತ್ರ ಈ ದೇಹವಂತೆ ರಕ್ಕಸರ ತುಳಿತಕ್ಕೆ ನಲುಗಲು ಹೇಳಿಮಾಡಿಸಿದಂತೆ ಅವರ ಅಮಲ ಮೋಜಿನ ಘಮಲಿನಲಿ  ಬೆವರಹನಿಯ ಕಂಟು ವಾಸನೆಗೆ ಆಸೆ ಕಮರಿ ಹೆಣ್ಣಾದ ನಮ್ಮೀ ಭವಿಷ್ಯದ  ಬದುಕ  ಕನವು ಕದಡಿ ಶೋಷಣೆಯ ಹತ್ತಿಕ್ಕಲು ದನಿ ಬಿಕ್ಕುತ್ತಿದೆ.. ಸಿದ್ದು ಮೂರ್ತಿ, ತುಮಕೂರು.

ನೃತ್ಯ ಹಾಗೂ ಆರೋಗ್ಯ

ನೃತ್ಯ ಹಾಗೂ ಆರೋಗ್ಯ ***************** ನಾಟ್ಯವು ಭಾರತೀಯ ಸಂಸ್ಕೃತಿಯಲ್ಲಿ ಪಾರಂಪರಿಕವಾಗಿ ಬಂದಿರುವ ಸಾಂಪ್ರದಾಯಿಕ ಕಲೆ.ನೃತ್ಯವು ಒಂದು ಮನರಂಜನಾ ಕಲೆಯಾದರೂ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆ, ಧರ್ಮ,ಆಚರಣೆ, ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಅಭಿವ್ಯಕ್ತ ಕಲೆ.... ವಿವಿಧ ಭಾವ ಭಂಗಿಗಳಲ್ಲಿ ನವರಸಗಳನ್ನು ವ್ಯಕ್ತಗೊಳಿಸುತ್ತಾ , ಸನ್ನಿವೇಶವನ್ನು ವೈಭವವಾಗಿ ಸಮಗ್ರವಾಗಿ, ಆಕರ್ಷಕವಾಗಿ ಬಿತ್ತರಗೊಳಿಸುವ ಕಲೆ ನೃತ್ಯಕ್ಕಿದೆ... ಕಣ್ಣು, ಕಾಲುಗಳು,ಕೈಗಳು,ದೇಹ ಇವುಗಳ ಯಥೋಚಿತ ಚಲನೆ ಮೂಡಿಸುವ ಆಕರ್ಷಕ ಭಂಗಿಗಳು ನೋಡುಗರ ಮನದಲ್ಲಿ ಕುತೂಹಲ ಆಕರ್ಷಣೆಯನ್ನು ಕಾಯ್ದಿಟ್ಟುಕೊಂಡು ಭಾವನೆಗಳನ್ನು ಅರಳಿಸುವ ಅಧ್ಬುತ ಕಲೆ ಈ ನಾಟ್ಯ..., ಹಾಗೆಯೇ ಈ ನಾಟ್ಯದಿಂದ ಸಮಯೋಚಿತವಾಗಿ ಚಲಿಸುವ ಅಂಗಗಳಿಂದ ನಿಯಮಿತ ರಕ್ತಸಂಚಾರ ಗಳು ಅಂಗಾಂಗ ಗಳ ಕಾರ್ಯ ಸಮರ್ಪಕವಾಗಿ ಆಗುವುದರ ಜೊತೆಗೆ ಏಕಾಗ್ರತೆಯೂ ಸಿದ್ಧಿಸುತ್ತದೆ..ಕ್ರಮೇಣ ಮಾನಸಿಕ ಆರೋಗ್ಯ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ... ಆದುದರಿಂದ ನೃತ್ಯ ಪರೋಕ್ಷವಾಗಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ... ಯೋಗಾಭ್ಯಾಸದಿಂದ ಹೇಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೋ ಹಾಗೆಯೇ ನೃತ್ಯ ಹಾಗೂ ನೃತ್ಯಾಭ್ಯಾಸ ಗಳು ಕೂಡ ಪರೋಕ್ಷವಾಗಿ ಯೋಗಾಭ್ಯಾಸದಂತೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ... ಎಂಬುದನ್ನು ನಿಸ್ಸಂಶಯವಾಗಿ ಈ ಸಂದರ್ಭದಲ್ಲಿ ಹೇಳಬಹುದು... ನಾಟ್ಯದ ವ...

ಅಭಿನಂದನಾ ಪತ್ರ

Image
 

ದೇಶಭಕ್ತಿ ಗೀತೆ ಸ್ಪರ್ಧೆ

Image
 

ಅಭಿನಂದನಾ ಪತ್ರ

Image