Posts

Showing posts from July 26, 2020

ಆಧ್ಯಾತ್ಮಿಕ ವಿಚಾರ

••••••••••••••••••••••• ಆಧ್ಯಾತ್ಮಿಕ ವಿಚಾರ ಒಂದು ಚಿಂತನೆ °°°°°°°°°°°°°°°°°°°°°°°°°°°°° ಆಧ್ಯಾತ್ಮಿಕತೆ ಮನುಷ್ಯನ ವ್ಯಕ್ತಿತ್ವವನ್ನು ಸಕಾರಾತ್ಮಕವಾಗಿ ಬದಲಾಯಿಸಬಲ್ಲ ಒಂದು ಉತ್ತಮ ವಾದ "ಜ್ಞಾನ ಧಾರೆ"ಇದು ಧರ್ಮದ ಯಥೋಚಿತವಾದ ಜ್ಞಾನಗಳನ್ನು ಒಬ್ಬ ಸಾಮಾನ್ಯ ವ್ಯಕ್ತಿಗೆ ನೀಡಿ ಅವನ ಸುಪ್ತಜ್ಞಾನವನ್ನು ಎಚ್ಚರಿಸುವ ಮೂಲಕ, ಮೌಲ್ಯಗಳು, ಸಕಾರಾತ್ಮಕ ಆಲೋಚನೆಗಳು, ಏಕಾಗ್ರತೆ, ಧ್ಯಾನ, ನಂಬಿಕೆ, ತಾಳ್ಮೆ,ಈ ಎಲ್ಲಾ ಗುಣಗಳು ಅವನಲ್ಲಿ ಮೈಗೂಡುವಂತೆ ಮಾಡುತ್ತದೆ.., ಪ್ರಸ್ತುತ ಸಮಾಜದಲ್ಲಿ ಕಾಣೆಯಾಗುತ್ತಿರುವ ಮೌಲ್ಯಗಳು ವ್ಯವಸ್ಥೆ, ನೀತಿ, ವಿಶ್ವಾಸ, ನಡೆನುಡಿ ಎಲ್ಲವೂ ಆಧ್ಯಾತ್ಮ ಜ್ಞಾನದ ಅರಿವಿಲ್ಲದ ಕಾರಣ ವ್ಯಕ್ತಿಯ ವ್ಯಕ್ತಿತ್ವದಿಂದ ಮರೆಯಾಗುತ್ತಿವೆ., ಸಂಸ್ಕೃತಿ, ಸಂಸ್ಕಾರಗಳು ಮರೀಚಿಕೆಯಾಗಿದೆ.. ಆದ್ದರಿಂದ ಪ್ರಸ್ತುತ ಆರೋಗ್ಯ ಕರ ಸಮಾಜ ನಿರ್ಮಾಣ ವು ಆಧ್ಯಾತ್ಮಿಕ ಹಿನ್ನೆಲೆಯ ವ್ಯಕ್ತಿ ಮತ್ತು ಸಮುದಾಯದಿಂದ ಸಾಧ್ಯ ಎಂಬ ಆಶಯ ವನ್ನ ತೋರುತ್ತೇನೆ.. ಆಧ್ಯಾತ್ಮಿಕ ವಿಚಾರಗಳು ವ್ಯಕ್ತಿಯ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತದೆ.. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢ ವ್ಯಕ್ತಿತ್ವ ಹೊಂದಲು ಸಹಕಾರಿಯಾಗಿದೆ.. ಆಧ್ಯಾತ್ಮ ತತ್ವಗಳು ಧರ್ಮದ ಹಿನ್ನೆಲೆ ಹೊಂದಿರುವ ಕಾರಣ ಆ ತತ್ವಗಳನ್ನು ತನ್ನ ಜೀವನದಲ್ಲಿ ಅನ್ವಯಿಸಿಕೊಳ್ಳವ ವ್ಯಕ್ತಿ ಸತ್ಪ್ರಜೆ , ಸತ್ಪುರುಷರ ಸಾಲಿನಲ್ಲಿ ರಾರಾಜಿಸುತ್ತಾನೆ... ಆಧ್ಯಾತ್ಮದ ವ...

ಕಾನನರೋಧನ

🌱ಕಾನನರೋಧನ🌱 ಹಚ್ಚ ಹಸಿರು ಪಚ್ಚೆ ಪೈರು ಗಿಡ ಬಳ್ಳಿ ನಗುತಾವೆಂದು ವಸುಂಧರೆಯ ಬಳಸಿ ತಾ ಹಸಿರು ಹೊದಿಸಿ ನಲಿತಾವೆಂದು ಧರಣಿ ನವವಧುವಂತೆ ನಾಚಿದ ಮಿಂಚು ನಲಿವುದೆಂದು ನೆಲಮುಗಿಲ ಸಂಗಮದ ಶಾಶ್ವತ ಸೊಬಗ ಕಾಣುವುದೆಂತು ಧರಣಿಯ ಜೀವಬಳ್ಳಿಯ ಉಸಿರ ಕಸಿವ ಸ್ವಾರ್ಥ ದಲ್ಲಿ ಬಲಿಯಾದ ಕುಡಿಗಳ, ಎಲೆ ಬಳ್ಳಿ ರೆಂಬೆ ಕೊಂಬೆಗಳ..., ಕೊನೆಗೆ ಮೂಲ ಬೇರುಗಳ ಹಿರಿದು ತಗೆದ ಹಿಗ್ಗಿನಲಿ ಕುಣಿದಿದ್ದ ಸ್ವಾರ್ಥ ,ಧರಣಿಒಡಲ ನೋವ ಇಮ್ಮಡಿಸಿತು ಅರಳಿ ನಗುವ ಹೂವ ಮೊಗ್ಗಲ್ಲಿ ಚಿವುಟಿ ಎಸೆದು ಬಿಗಿದಪ್ಪಿದ ಲತೆಬಳ್ಳಿಯ ನಡುವ ಕತ್ತರಿಸಿ ತೆಗೆದು ಬಿರುಗಾಳಿಗೆ ತೂಗಿ ತಡೆವ ಮರಗಳ ಒಡಲು ಕೊಯ್ದ ವನ ವ ಕಾಡಿದ ರೋಧನಕೆ,ಮನೆಯಂಗಳ ಮಿನುಗಿತು ಧರೆಗುರುಳಿದ ಮರಗಳು ಜೀವ ಕಳೆದಕೊಂಡು ಬಯಲುದ್ದ ರಂಗಾಗಿ ಮಲಗಿದ ರಹದಾರಿಗಳು ಮಲಿನ ಗಾಳಿ ಒಸರಿ ಇಂಚೂಬಿಡದ ಕಾಂಕ್ರೀಟು ವನಗಳು ಕೋಪದಿ ರಾಚಿದ ಮಳೆಗೆ ಕೊಚ್ಚಿ ಹೋಗುವ ಮಣ್ಣರಾಶಿ ನರನ ನಡೆಗೆ  ಕೋಪದಿ ಗುಡಗಿಹಳು ಧರಣಿ ಸ್ವಾರ್ಥ ದ ತಳಹದಿ ಕಳಚುವ ತನಕ,ಜೀವರಾಶಿಗೆ ಕಂಟಕ ತಳೆದು, ಕುಕೃತ್ಯ ಗಳ ತೆರೆದು ಕೊಲ್ಲುವತನಕ ಅರಿವು ಮೂಡುವ ತನಕ, ಮನುಜನ ಸ್ವಾರ್ಥ ಅಳಿವತನಕ..!!!! 🌱ಸಿದ್ದುಮೂರ್ತಿ🌱