Posts

Showing posts from July 12, 2020

ಅರಿವು

ಅರಿವು ತನ್ನ ತಾ ಅರಿಯದೇ,ತಿಳಿಯದೇ ಇತರರನ್ನು ಅರಿಯಲು ಮುಂದಾದೊಡೆ ಅರಿವಿನ ಅರ್ಥವೇ ಅನರ್ಥ  ಶ್ರೀ ಮಾಲತೇಶ  -ಸಿದ್ದುಮೂರ್ತಿ

ಆಸೆ

ಆಸೆ ಇನ್ನಿಲ್ಲದಂತೆ ಕಾಡುತ್ತದೆ ., ಬಣ್ಣದ ಭಾವಗಳ ಹೊತ್ತು ಕನಸ್ಸಿನ ರೆಕ್ಕೆಗಳ  ಕಟ್ಟಿ ಎಲ್ಲೆ ಮೀರಿ ಹಾರುತ್ತದೆ , ಮಿಕ್ಕಿ ಮಿಗಿಲಾದರೂ ನಿಲ್ಲದೇ ಓಡುತ್ತದೆ ಮರೀಚಿಕೆಯ ಹಿಂದೆ... -ಸಿದ್ದುಮೂರ್ತಿ

ಸತ್ಯಾರ್ಥ ಪ್ರಕಾಶ

  ಸತ್ಯಾರ್ಥ ಪ್ರಕಾಶ ಹಾಗೆಯೇ ತಾಳ್ಮೆ ಮನುಷ್ಯನ ವ್ಯಕ್ತಿತ್ವವನ್ನೇ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.. ಆದ್ದರಿಂದ ತನ್ನೆಲ್ಲಾ ಕೆಲಸಗಳಲ್ಲಿ ತಾಳ್ಮೆ ಅಗತ್ಯ... ತಾಳ್ಮೆಯಿಂದ ನಮ್ಮ ಸಹನಾ ಶಕ್ತಿ ಯನ್ನು ಹೆಚ್ಚಿಸುತ್ತದೆ. ಸಂಧರ್ಭ ಗಳು ಯಾವುದೇ ಇರಲಿ, ಪರಿಸ್ಥಿತಿ ಗಳು ಹೇಗೇ ಇರಲಿ ನೋವಿರಲಿ ನಲಿವಿರಲಿ ಅವುಗಳನ್ನು ಮೊದಲು ಸಮಾನ ಮನಸ್ಕನಾಗಿ ಸ್ವೀಕರಿಸುವುದು ಬಹುಮುಖ್ಯ.ಅದೇ ಸಹನಾ ಶಕ್ತಿ. ಈ ಸಹಿಷ್ಣುತೆ ಮನೋಭಾವ ಸಕಾರಾತ್ಮಕ ಆಲೋಚನೆ ಯೆಡೆಗೆ ನಮ್ಮನ್ನು ಪ್ರೇರೇಪಿಸುತ್ತದೆ.ಈ ಸಕಾರಾತ್ಮಕ ಆಲೋಚನೆ ಗಳು ನಮ್ಮ ಯಾ ವುದೇ ಸಮಸ್ಯೆ ಗಳನ್ನು ಪರಿಹರಿಸುವಲ್ಲಿ ಸೂಕ್ತ ಮಾರ್ಗದರ್ಶನ ನನ್ನು ನೀಡುತ್ತದೆ. ಆದ್ದರಿಂದ ಸಹನೆಯಿಂದ ವರ್ತಿಸುವುದು ಮುಖ್ಯ ವಾಗಿರುತ್ತದೆ ಸಹನೆಯಂತ ಆದರ್ಶ ಗುಣಗಳನ್ನು ನಾವು ಬೆಳಸಿಕೊಳ್ಳೋಣ.. ಸಹನೆಯನ್ನು ಮೀರಿದ ವರ್ತನೆ ಗಳು ನಮ್ಮನ್ನು ಕೋಪಕ್ಕೆ ಎಡೆಮಾಡಿ ಕೊಡುತ್ತದೆ , ಮತ್ತು ಮುಂದಾಗುವ ಅನರ್ಥ ಗಳಿಗೆ ಬೆಲೆ ತೆರಬೇಕಾಗುತ್ತದೆ.....

ಸಾಮರಸ್ಯ

ಸಾಮರಸ್ಯ ಮುಗಿಲ ಚೆಲವೋ ನೇಸರ ಭುವಿಗೋ ವನಸಿರಿ ಸಾಗರ ರವಿಯ ಹೊಂಬೆಳಕ ಧಾರೆ ಭುವಿಗೆ ಸಂಚಲನ ಧಾರೆ ನಡುವೆ ನವಿರ ಚೆಲುವು ನಿಸರ್ಗ ಸೊಬಗಿನ ಒಲವು ಮಧುರ ಬಂಧದ ನಲಿವು ತಳೆದ ಸಾಮರಸ್ಯದ ಹೊನಲು -ಸಿದ್ದುಮೂರ್ತಿ

ಮನವೆಂಬ ಹೂ

ಮನವೆಂಬ ಹೂ ಮನವೆಂಬ ಹೂವಿಗೂ ಸದಾ ಅರಳುವ ಇಂಗಿತ ಒಲವಾಗಿ ಮಮತೆಯಾಗಿ ವಾತ್ಸಲ್ಯವಾಗಿ ಪ್ರೀತಿಯಾಗಿ ಭಕ್ತಿಯಾಗಿ ಇಚ್ಚೆಯಾಗಿ ಭಾವರಸಗಳು ಸದಾ ಅರಳುತ್ತಾ ಆಯಾ ಭಾವದ ಕುಸುಮ ಸೂಸುವ ಸುಗಂಧದಂತೆ. ಪರಿಮಳ ಭರಿತ.... -ಸಿದ್ದುಮೂರ್ತಿ

ಅಂತ್ಯವಲ್ಲ ಆರಂಭ

Image
 ಅಂತ್ಯವಲ್ಲ ಆರಂಭ ~~~~~~~~~~ ಬದುಕ ಬುತ್ತಿಯ ಭಾರ ಹೊತ್ತು ಇಳಿಸಂಜೆಯ ಜೀವಕೆ ನೆನಪಾಗಿ ನೋವು ಮಾತಾಗದೆ   ಮಡುಗಟ್ಟಿದೆ ಮೌನ ಮುಸಿ ನಕ್ಕು ಮರೆಯಾಗಿದೆ ಬೊಗಸೆಯಲಿ ಬಚ್ಚಿಟ್ಟ ಕಾಳಜಿ ಹೊಸತನ ತಳೆದು ತೊರೆಸಿದೆ.. ಟಿಸಿಲೊಡೆದ ರಂಬೆಗೆ ಅಂಟಿದ್ದ ಹಣ್ಣೆಲೆ ಅಲ್ಲಲ್ಲಿ ಉದುರುದುರಿ ಚೆದುರಿವೆ ನೆಲೆಗಾಣದೆ... ಆಗಿನ್ನೂ ಕುಡಿಗಳ ಆರೈಕೆ ಬಸಿದ ನೆತ್ತರ ಬೆವರನಿಯ ಬಡಕಲು ದೇಹವೇ ಕಣ್ಣೊಳಗೆ ಬಚ್ಚಿಟ್ಟು ನೀರೆರೆದು ಪೋಷಿಸಿತ್ತು ಹಸನಾಗಿ ಬೆಳೆದು ಸೊಗಸಾದ ಬದುಕಿನಾಶ್ರಯ ಪಡೆವ ಕನಸೊತ್ತು.. ಉರುಳುರಳಿದ ದಿನಗಳು ಬದಲಾದ ಋತುಗಳಲ್ಲಿ ಉದುರಿದೆಲೆಗಳ  ಚಿಗುರಿದೆಲೆಗಳು ನಗುವ ಹಸನು ಬದುಕ ಹಿಂದೆ ಬಸವಳಿದ ಶ್ರಮಗಳ ಮರೆತು .. ಅರಿಯದ ಪ್ರಜ್ಞೆಗಳು ಹಿಂಡಿಂಡು ಸಾಗಿ ಹಂಡೆಗಟ್ಟಲೆ ಅಭಿಷೇಕ ಸುರಿದ ಶಿಲೆಗಳೇನು, ಕರಗಿ ವರವಿತ್ತವೇ ಹತ್ತಿರದ ಹೆತ್ತು ಹೊತ್ತ ಜೀವಗಳ ಮರೆತು ತೊರೆವವರ ಬದುಕು ಎತ್ತಲಾಗಿ..? ಬೆಂದು ಸುಕ್ಕಾದರೂ ಅಂಜದ ಎದೆ ತಳೆದ ಅದಮ್ಯ ಇಚ್ಚೆ,ತೊರೆದಹಂಗು ಕೈಹಿಡಿದವಳ ಕರಪಿಡಿದು ಸಾಗಿದೆ ಹೊಸ ಇಂಗಿತದಲಿ ಹೊಸ ಬದುಕ ಆರಂಭಿಸಿ... ಸಿದ್ದುಮೂರ್ತಿ

ರೈತಾಪಿ ಜೀವನ

ರೈತಾಪಿ ಜೀವನ ~~~~~~~ ಹಸಿರು ಹೊದ್ದ   ಸೀಮೆ, ಉಸಿರಲಿ ಬೆರೆತ ಗರಿಮೆ ಸೊಬಗ ಸೊಗಡು ಅಂಟಿ ಮೆರೆದ ಬದುಕು ಸಿರಿಯಲಿ ಮನೆಯಂಗಳ  ಚಿತ್ರಣ ಮನವೊ ನಗುವ ಅಂಕಣ ದಿನವೂ ಹೊಸ ಕಳೆಯು ತಳೆದು ದೂಡುವ ಬದುಕು ನಿತ್ಯ ಹೃದಯಂಗಮ ಮೂಡಣ   ನೇಸರ   ಏರಿದ   ನಗುತಲಿ ನಿದಿರೆಯ  ಕಳೆದು ಮೈಯ ಗೊಡವಿ ನಿತ್ಯ ಗೆಲಸ ಹೆಗಲಿಗೇರಿ ನಿಷ್ಕಲ್ಮಶ  ಭಾವ, ತೂಗಿ ತೊನೆವ ತೆನೆಯಂತೆ ಹಸನಾದ ನೆಲದಲ್ಲಿ ಕನಸ   ಬೀಜ ಬಿತ್ತಿದೆ.. ಕಣ್ಣ ರೆಪ್ಪೆಯೊಳಗೆ ಬಚ್ಚಿಟ್ಟಿ ಕನಸ ಕೂಸಂತೆ ಪೋಷಿಸಿಟ್ಟಿ ಬೆಳೆಯ ಫಸಲು ನಿರೀಕ್ಷಿಸಿ... ಚಿಗುರು ಒಡೆಯುವ ಬಯಕೆಯು  ತನ್ನೊಳಗೆ ಅವಿತು ವರುಣನ   ಕಾಯ್ವ ಮನಗಳಿಗೆ ಹೊಲ ಗದ್ದೆಗಳೇ ಬೆಲ್ಲ ಮೆದ್ದ ಬದುಕಂತೆ ದಣಿದ ದೇಹ ಬಸಿದರಕ್ತ ಬೆವರು ಹನಿ ಕಾಲಿಗೆ ಅಂಟಿದ ಕೆಸರು ಮುದ್ದೆ ಬಾಯಿ ಮೊಸರು ಸವರಿದಂತೆ ಸುಖದ ಜಾಡ ಹಿಡಿದು ಸವೆದ ಜೀವವು ರಾಶಿ ಮಾಡಿ ಹಿಗ್ಗುವ   ಸುಗ್ಗಿ ಯಂತೆ.. ಗೋಧೂಳಿ ಹೊತ್ತು ರಾಸುಗಳ   ಹಿಂಡಿಂಡು ಸಾಗಿದ   ಸಾಲುಗಳು, ಸಾಲಿಕ್ಕಿದ ಬಾನಾಡಿ  ದಂಡು ಮುಗಿಲು  ಮುಡಿದ ಹೂಗಳಂತೆ... ದಿನದ   ಬದುಕು ಮರಳಿತ್ತು ಗೂಡಿಗೆ.... ••ಸಿದ್ದುಮೂರ್ತಿ

ದೈವ (ವಚನಗಳು)

ವಚನ-೧ ಕಂಡ ಶಿಲೆಗಳಿಗೆಲ್ಲಾ ಪಂಚಾಮೃತ ಸುರಿದು ಪ್ರಚಾರದ ಸ್ವಾರ್ಥ ಕ್ಕೆ ದಾನವೆರೆದು ನಿಜಹಸಿವುಗಳ ಕಡೆಗಿಟ್ಟು ,ಹೆತ್ತವರ ಮರೆತು ದೈವ ಕಾಣಹೊರಟವರ ಮೆಚ್ಚನಾ ಶ್ರೀಮಾಲತೇಶ ~~ಸಿದ್ದು ಮೂರ್ತಿ

ಸೃಜನಶೀಲತೆ

ಇದುವರೆಗೂ ಯಾರೂ ಮಾತನಾಡದ ಸಂಗತಿಗಳ ಬಗ್ಗೆ ಯೋಚಿಸುವುದೇ ಸೃಜನಶೀಲತೆ...   ~ಹೋವರ್ಡ ಗಾರ್ಡನರ್ (ಮನೋವಿಜ್ಞಾನಿ)

ಧರ್ಮ ಮಾರ್ಗ

ಲೇಖನ ಮಾಲಿಕೆ ೧           ಶೀರ್ಷಿಕೆ:ಧರ್ಮ ಮಾರ್ಗ ಬಹಳ ಹಿಂದಿನಿಂದಲೂ  ನಾವು ನಮ್ಮ ಜೀವನದಲ್ಲಿ ಅನೇಕ ಆಚರಣೆಗಳು, ಪದ್ದತಿಗಳು, ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿದ್ದೇವೆ.ಇವೆಲ್ಲ ನಮ್ಮ ಜೀವನವನ್ನು ಒಂದು ಚೌಕಟ್ಟಿನಲ್ಲಿ ಇಟ್ಟಿರುತ್ತದೆ.. ಆದರೂ ಇವು ನಮ್ಮ ಜೀವನವನ್ನು ಅರ್ಥಪೂರ್ಣವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಹೀಗೆ ಜೀವನದಲ್ಲಿ ಅಳವಡಿಸಿಕೊಂಡಿರುವ ಕಾನೂನು ಕಟ್ಟಳೆಗಳೇ 'ಧರ್ಮ ಶಾಸ್ತ್ರಗಳು'..ಇವು ಮೌಲ್ಯಯುತವಾದ ಜೀವನತತ್ವಗಳನ್ನು ಸಾರುತ್ತವೆ.ಒಂದುರೀತಿಯಲ್ಲಿ ಧರ್ಮ' ಜೀವನಸಂವಿಧಾನ ,'ವಾಗಿದೆ.. ಇದು ಪ್ರತಿಯೊಂದು ಹಂತದಲ್ಲೂ ಜೀವನನಡೆಸುವ ಮಾರ್ಗ,ಆದರ್ಶ ಮಾನವೀಯ ಮೌಲ್ಯ, ಸನ್ನಡತೆ, ಸಂಸ್ಕಾರ ಗಳನ್ನು ಅರ್ಥೈಸುವ ಸಾರ.. ಶಿಷ್ಟಾಚಾರ,ಸಭ್ಯತೆ, ಸನ್ನಡತೆಯ  ಆಚರಣೆಗಳೇ ಸಂಸ್ಕಾರಗಳು.. ಉತ್ತಮ ನಾಗರೀಕತೆ ಶಿಸ್ತು ಬದ್ಧತೆ,ಗುರುತರ ಜವಾಬ್ದಾರಿ, ರೀತಿ ನೀತಿಗಳು ,ಮಾನವೀಯತೆಗಳು ಸಂಸ್ಕಾರದ ಅರ್ಥದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಸಮಾಜ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಮಾಜದಲ್ಲಿ ನ ವಾಸ್ತವಾಂಶ ಗಳನ್ನು ಅವಲೋಕಿಸಿದಾಗ, ಪ್ರಸ್ತುತ ಜನಜೀವನದಲ್ಲಿ ಧರ್ಮ ಸಂಸ್ಕಾರಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ...ಧರ್ಮೋ ರಕ್ಷತಿ ರಕ್ಷಿತ: ಎನ್ನುವ ಮಾತಿನಲ್ಲಿ, ನಾವು ಧರ್...

ಸತ್ಯಾರ್ಥ ಪ್ರಕಾಶ

ಸತ್ಯಾರ್ಥ ಪ್ರಕಾಶ ಜೀವನದಲ್ಲಿ ಅನೇಕ ತೊಂದರೆಗಳು ಎದುರಾಗಿರುತ್ತಿರುತ್ತವೆ. ಇದು ಎಲ್ಲರ ಜೀವನದಲ್ಲಿ ಮಾಮೂಲು, ಕಷ್ಟಗಳು ಬಡವ ಬಲ್ಲಿದ,  ಮೇಲು, ಕೀಳು  ಎಂಬಿತ್ಯಾದಿ ವರ್ಗದ  ಜನರನ್ನು ನೋಡುವುದಿಲ್ಲ.ಆದ್ದರಿಂದ  ಬದುಕು ಹೇಗೆ ಬರುತ್ತದೆಯೋ ಹಾಗೆ ಸ್ವೀಕರಿಸಬೇಕು.. ಸಾಮಾನ್ಯವಾಗಿ ವ್ಯಕ್ತಿ  ತನ್ನ ಜೀವನದಲ್ಲಿ ಯಾವುದೇ ಸಮಸ್ಯೆಗೆ ಎದೆಗುಂದದೆ ಸುಲಭ ವಾಗಿ ಎಲ್ಲ ಸಂದರ್ಭದಲ್ಲಿ  ಪರಿಸ್ಥಿತಿಯನ್ನು ಅರ್ಥಮಾಡಿಕೊಡು ನಿಭಾಯಿಸಿಕೊಂಡು ಹೋಗುವ ಮನಸ್ಥಿತಿ ಯನ್ನು ನಾವು ಹೊಂದಬೇಕು.. ಆ ಸಮರ್ಥತೆಯನ್ನು ನಾವು ಪಡೆಯಲು ಮೊದಲು ನಮ್ಮ ಮೊದಲ ವ್ಯಕ್ತಿತ್ವ ಗಳನ್ನುರೂಪಿಸಿಗೊಳ್ಳಬೇಕು. ಮೊದಲಿಗೆ  ತಾಳ್ಮೆ., ಇದು ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ... ತಾಳ್ಮೆ ಯು ಪರಿಸ್ಥಿತಿಯನ್ನು ಅವಲೋಕಿಸಲು ಸಮಯಾವಕಾಶ ನೀಡುತ್ತದೆ. ಅನಂತರ ಸಮಸ್ಯೆಗಳಿಗೆ ಪರಿಹಾರ ಗಳನ್ನು ಹುಡುಕಲು ಮುಂದಾಗಬೇಕು.. ಅಲ್ಲ ದೆ  ತಾಳ್ಮೆಯು  ಕೋಪವನ್ನು ನಿಯಂತ್ರಿಸುತ್ತದೆ.. ಕೋಪದಿಂದಗಬಹುದಾದ ಅನಾವುತಗಳನ್ನು ತಪ್ಪಿಸುತ್ತದೆ... ತಾಳ್ಮೆಯಿಂದ  ನಾವು  ನಮ್ಮ ವ್ಯಕ್ತಿತ್ವ ದಲ್ಲಿ ಇನ್ನೊಂದು  ಸಮರ್ಥತೆ ಯನ್ನು  ಪಡೆದುಕೊಳ್ಳಬಹುದು  ಅದುವೇ ಅವಲೋಕನ, ವಿಶ್ಲೇಷಣೆ.. ಪರಿಸ್ಥಿತಿ ಎಂತಹುದೇ ಇರಲಿ ಅದರ  ಸ್ವರೂಪ,  ಮೂಲ, ಪರಿಹಾರಗಳನ್ನು ಕಂಡುಕೊಳ್...

ಮಳೆಗಾಲ

ಇಳೆಯ ಮಜ್ಜನ ಮೊದಲ ಬಾರಿ ಮುಂಗಾರು ಸಜ್ಜಾಗುವ ಮುನ್ನಾ ತಂಪಿನ ಸಿಂಚನದಿ ರಮಿಸಿದ ಮುಗಿಲು ಧರೆಗೆ ಒಲವಧಾರೆಯಂತೆ. ಅರಳಿ ನಿಂತ ಹೂವ ಹಸಿರು ಮಿಂಚ ಎಲೆ ಬಳಕೋ ಲತೆಗಳು ಅಲಲ್ಲಿ ತುಂಬಿ ತುಳುಕಿ ಹಳ್ಳಕೊಳ್ಳ ಕೆನ್ನೀರ ದಾಟಿ ಕೆಸರ ಮೆತ್ತಿದ ಕಾಲ,ನಡಿಗೆಯಲ್ಲಿ ಛತ್ರಿ ನೆರವಾಗಿ ತೋಯದಂತೆ. ಅಜ್ಜನ ಹಳೆಯ ಮಾಳಿಗೆ ಮನೆ ಹನಿ ಜಿನುಗದಂತೆ ಹದವಾಗಿ ಜೋಡಿಸಿ ಹರಿವ ನೀರಿಗೆ ಪನ್ನುಳಿಗೆ ಜೋಡಿಸಿದೆ ಮಳೆಗಾಲ ಪ್ರಾರಂಭ ತುಸುಚಿಮುಕಿಸುವ ಹಿತವಾದ ಚಳಿಗೆ ಬೆಚ್ಚಗಿನ,ಖಾರ ಹಪ್ಪಳ, ಸಂಡಿಗೆ, ಚಕ್ಕುಲಿ ತಿಂಗಳ ಹಿಂದೆ ಸಿದ್ದಗೊಂಡಿದೆ. ಹನಿ ಹನಿಗಳ ಚಿಟ ಪಟ ಕಲರವ ಧಾರೆಯ ಪರಿಧಿಯಂಚು ಮುಗಿಲು ಸೀಳುವ ಮಿಂಚು ರಭಸದಿ ಅಪ್ಪಳಿಸಿ ಹರಿದ ನೀರು ನಿಲ್ಲದೆ ಓಡುತ್ತದೆ ಹನಿ ಹನಿ ಕೂಡಿ ಹಳ್ಳತುಂಬಿ, ಚೆಲ್ಲುತ್ತದೆ. ಪಚ್ಚೆ ಪೈರು ನಾಟಿ ಗೆ ಸಾಲಿಟ್ಟ ಹಸಿರು ಕಾಲಿಂಗಂಟಿದ ಕೆಸರು ಮುದ್ದೆ ಮೊಸರುಂಡ ಜನಕ್ಕೆ ನೆನಪಾಗಲಿಲ್ಲ ಶ್ರಮದ ಸೇವೆ ಸುಲಿಗೆ ಯಾಗಿ ಸೊಗಸಕಾಣುವವಗೆ ಮೈಲಿಗೆಯಂತೆ ಮಳೆಗೆ ತೋಯ್ದ ಬದುಕು ಕಣ್ಣ ನೀರ ನುಂಗಿ  ಧರೆಗೆ ಇಳಿದಂತೆ. ವರುಷವೂ ವರುಣನ ಕಾಯ್ವರು ಹಸನಾದ ಬದುಕ ಹದಗೊಳಿಸಿದ ನೆಲದಲ್ಲಿ, ಬಿತ್ತಿ ಬೆಳೆಯಲು ಕನಸ ಚಿಗರೊಡೆಸುವ ಬಯಕೆಯ ಸೊಗಸಾದ ಮಳೆಗಾಲಕ್ಕೆ ಕಾಯುತ್ತಿರುವರು - ಸಿದ್ದು ಮೂರ್ತಿ

ಮನದ ಮದರಂಗಿ

**************** ಮನದ ಆಸೆ ಹೊಸತನದ ಹುರುಪಾಗಿ ನಲಿಯುತಿದೆ ಹರುಷದ ಹೊನಲಿನಲಿ ಹೊಸಭಾವ ತಳೆದು ಕುಣಿಯುತಲಿದೆ ಮನ ಅರಳಿದ ಹೂವಂತೆ ನಗುತಲಿದೆ ಹಸೆಮಣೆಯ ಹೊಂಗನಸು ನನಸಾಗಿ ಹೊಸಬದುಕ ಹೊಸ್ತಿಲಲಿ ಎದುರಾಗಿ ಮೆಚ್ಚಿದ ಸಂಗಾತಿ ಕೈ ಹಿಡಿವ ಸಮಯದಲಿ ಮನದ ಚಿತ್ತಾರ ಮದರಂಗಿಯ ಬಿಂಬದಿ ಅಚ್ಚಾಗಿದೆ ಮಾತಗಳ ಮೇಲೆ ಮೌನದೆರೆಯು ಹೇಳಲಿಚ್ಚಿಸುವ ಅದಮ್ಯ ಆಸೆಯು ಕೊಂಚ ನಾಚಿಕೆ ತಳೆದ ಬಿಗುಮಾನವು ಕಣ್ಣಂಚಲಿ ಕಾಣುವ ತವಕಗಳೊಟ್ಟಿಗೆ ಮಿನುಗುತ್ತಿವೆ ಮುದದ ಮನ ಶೃಂಗಾರಗೊಂಡಿದೆ ಸಿಂಧೂರದಣೆಯ ಬಾಸಿಂಗ ನಗುತಲಿದೆ ಮಹದಾಸೆಗಳ ಹೆಕ್ಕಿ ಸಿಕ್ಕಿದ ಮನವು ಮೊಗದಲ್ಲಿ ಬಿಂಬಿಸಿ ಹೊಳೆಯುತಲಿದೆ ಸಂಗಾತಿಯ ಮೆಚ್ಚಿದ ಒಲವು ರಂಗಾಗಿ ಮದರಂಗಿಯ ಎಳೆಗಳು ಸೊಗಸಾಗಿ ಮೂಡಿದ ಚಿತ್ತಾರ ಅಂದದ ಮದರಂಗಿಯಂತೆ ಬಯಸಿದ ಬದುಕು ಹಸನಾಗಿ ಅಚ್ಚಳಿಯದಂತೆ... ----ಸಿದ್ದುಮೂರ್ತಿ

ಋಣಾನುಬಂಧ

ಅಮ್ಮನ ತೋಳತೆಕ್ಕೆಯಲಿ ಚಂದದ ಜೋಗುಳವದು ಜೀವಕಣವೂ ಅನುರಣಿಸುವುದಿಲ್ಲಿ ಅಮ್ಮನ ಒಲುಮೆಯ ಚಿಲುಮೆಯಲ್ಲಿ ಮಿಂದ ಬದುಕು ಪಾವನವೇ ಸರಿ ಮಮತೆಯೊಡಲ ಆರೈಕೆ ತಣಿಸಿ ರಮಿಸುವ ಪರಿ ತಂಪು ತುಂತುರು ಹನಿ ಸಹನೆಯ ಹೊನಲು ಕಂದನ ಅಪ್ಪಿ ಆಲಂಗಿಸಿ ಅಳುತಿರೆ ಮನಕರಗಿ ನೊಂದ ಭಾವುಕತೆ ಧರೆಗಿಳಿದ ದೈವ ಜೀವಪೊರೆವ ದೇವತೆ ಬೆರಳ ಹಿಡಿದು ನಡೆವಾಗ ತಪ್ಪಿದ ಹೆಜ್ಜೆ ತಿದ್ದಿ ತೀಡಿ ತೋರಿ ನಡೆಸಿದ ಹೆಜ್ಜೆ ಮನದಲಿ ಅಚ್ಚಾಗಿ ಬದುಕಲ್ಲಿ ಗುರುತಾಗಿ ಕರುಳ ಕುಡಿಯ ಏಳಿಗೆಗೆ ಬೆಳಕಾಗಿ ತೊದಲು ನುಡಿಗಳ ತಿದ್ದಿ ಮೊದಲ ನುಡಿಗಳು ಅರಳಿನಗುವಂತೆ ಅಮ್ಮನ ಶಾಲೆ ಗರಡಿ ಮನೆಯಂತೆ ರಮಿಸಿ ತುತ್ತು ಅನ್ನ ತಿನ್ನುವಾಗ ಅಂಗಳದಿ ಚಂದ್ರಮನೂ ನಲಿವಂತೆ ನಿನ್ನದೇ ರಕ್ತ ಮಾಂಸ ಹಂಚಿ ಕರುಳಬಳ್ಳಿಗಂಟಿ ಬೆಳೆದು ನವಮಾಸಗಳ ನೋವುಂಡು ನೋವ ಸೆಲೆಯಲ್ಲಿ ನಲಿವುಂಡು ಮೈದಳೆದ ಜೀವವ ಪೊರೆದು, ಬಸಿದ ರಕ್ತಎದೆಹಾಲ ಕುಡಿದು ಬೆಳೆದ ಕರುಳ ಕುಡಿ ನಿನ್ನ  ಋಣಿಯಾಗಿ -ಸಿದ್ದುಮೂರ್ತಿ