Posts

Showing posts from July 11, 2021

ಕವಿತೆ

Image
  ಹೀಗೂ ತ್ಯಾಗಜೀವಿಯಾಗಿ.. ----------------------------- ನಟಿಸುವ ನಗುವು ಈಗೀಗ ಸೋತುಬಿಟ್ಟಿದೆ... ಅವರ ಇಚ್ಚೆಗಳಿಗೆ ‌ಅಚ್ಚಾಗಿ ಮುದ್ರೆಯೊಂದಿಗೆ ಬಹಿರಂಗ ಮಾರಾಟದ ಸರಕಾಗಿ.!! ನಿತ್ಯ ಇರುಳೋದಯ ಸ್ಫುರಿವ ಕತ್ತಲ ಮೌನದಂಕಣ ಮಾರುವ ರಾತ್ರಿಗಳ ವೇದಿಕೆ ನಲುಗುವ ಕರುಳ ವೇದನೆ...! ಹಳಸಿದೆದೆಯ ಕನಸುಗಳು ಮುಡಿದ ಆಸೆಗಳ  ಎಳೆದು ಇರಿದು ಕೊಲ್ಲುವ ಮುಳ್ಳಿನ ಹಾಸಿಗೆಗಳ ಮೇಲೆ ಹಾಸಿದ ಸೆರಗಿನ ಸುಕ್ಕು, ಸಿಕ್ಕು ನಲುಗುತ್ತಿದೆ...! ಸಭ್ಯತೆಯ ಎಲ್ಲೆ ದಾಟಿಸಿದೆ. ಅಸಭ್ಯ ಸೊಕ್ಕಿನ ಸೀಳು ಕಣಿವೆಗಳಲ್ಲಿ ಕೆಟ್ಟ ಹಸಿವಿನ ಚಟಗಳಿಗೆ ಇದೇ ದೇಹದ ಇಂಚಿಂಚು ಗುಟುಕಿಸಿ,ಭವ್ಯ ಸಮಾಜದೊಳು ಹೀಗೂ ತ್ಯಾಗಜೀವಿಯಾಗಿ ಉಳಿದು ಬಿಟ್ಟಿದ್ದು, ವಾಡಿಕೆಯಂತೆ ಬೆಳೆಸುವ ಪಟ್ಟು ಸಂಸ್ಕೃತಿಗೆ ಹೊರತಾದಂತೆ....! ಹೆತ್ತು ಹೊತ್ತು ಮಮತೆ ಎರೆವ ಒಡಲು ಒಸರುವ ಕ್ಷಣಿಕ ಬಯಕೆಗೂ ಎಗ್ಗಿಲ್ಲದೆ ಕಬಳಿಸುವ ಹಕ್ಕು ಕರಾರುನಾಮೆಯ ಹೊಕ್ಕು... ಚಪಲಗಳ ತೆಕ್ಕೆಗೆ ಸಿಕ್ಕಿ ಇಳಿದ ಕಾಮದ ಬಿಳುಲುಗಳ ಬಲವಾದ ಬಳಸಿಗೆ,ಹಿಂಡಿದ ಬದುಕು ನಿಸ್ಸಾರವಾಗಿದೆ, ತುಸು ನಿರಾಳವೂ ಕನಸಾಗಿದೆ.... ಜಗವ ಪೊರೆಯುವವಳಿಗೆ ನೋವ ಸರಣಿಗಳ ಎಣಿಕೆಗಳು ಒಂದೊಂದೇ ನಾರಿಯ ಪೂಜಿಸೋ ಧರೆಯಲ್ಲಿ ಅರಿವಿನೊಳಗೇ ಹರವಿಕೊಂಡ ಕಾಮಕೂಪಗಳು ಸಮಾಜದ ಕೊಡುಗೆಗಳೇ..!!! ಸಿದ್ದು ಮೂರ್ತಿ, ತುಮಕೂರು.

ಕವಿತೆ

Image
 ಸ್ವಾತಂತ್ರ್ಯದ  ನೆರಳಿನಲ್ಲಿ.. ---------------------------------- ಲೆಕ್ಕವಿಲ್ಲದಷ್ಟು ಜೀವಗಳು ಚೆಲ್ಲಿದ ರಕ್ತ ತರ್ಪಣ ತಬ್ಬಲಿಗಳ ಅಶ್ರುತರ್ಪಣ ತ್ಯಾಗ ಬಲಿದಾನಗಳು ಮಣ್ಣ ಕಣ ಕಣದಿ ಬೆರುತುಹೋಗಿವೆ.. ಅಂಜದೆದೆಯ ಗುಂಡಿಗೆಗಳು ಗುಂಡಿನ ಸುರಿಮಳೆಗೆ ಎದೆಯೊಡ್ಡಿ ಸಮರ್ಪಿಸುವ ಜೀವದಿ ಕಣ ಕಣದ ದೇಶಾಭಿಮಾನ ನೆತ್ತರ ಕಲೆಯ ನೆಲದಲ್ಲಿ ಅಚ್ಚಾಗಿವೆ. ಹುತಾತ್ಮರ ಪವಿತ್ರ ಆತ್ಮ ಚರಿತ್ರೆಗಳು ನಮ್ಮೀ ಸ್ವಾತಂತ್ರ್ಯದ ಮುಕ್ತ ನೆರಳು.. ನಮ್ಮದೀಗ ಯಾರ ಹಂಗಿಲ್ಲದ ಬದುಕು ಎಗ್ಗಿಲ್ಲದೆ ಸಾಗಿದೆ,ಎಲ್ಲೆಯ ದಾಟಿ ಚೆಲ್ಲುವ ನೆತ್ತರು ಈಗ  ಕ್ರೌರ್ಯ ಕಾದಾಟದ ಅಚ್ಚು. ಮಮಕಾರದ ಹುಚ್ಚು ಅಸೂಯೆ ವೈಷಮ್ಯದ ಹುಟ್ಟು ಗಲ್ಲಿ ಗಲ್ಲಿಗೂ,ಊರು ಕೇರಿಗೂ ಗದ್ದುಗೆಯ ಪೀಠಕ್ಕೂ  ಶಾಸನದ ಕರಾರುಗಳಿಗೂ ಅಂಟಿಕೊಂಡಿದೆ. ಕಳಚಿಬಿದ್ದವು ಸಹಬಾಳ್ವೆಯ ಕೊಂಡಿ ನಡುವೆ ಜಾತಿ ಅಂತರ ಇರಿಸಿ. ಕೋಮುವಾದಗಳ ಮುಂದಿರಿಸಿ, ನೀತಿ ಅಳಿದ ನೆಲವೀಗ ಸ್ವಾತಂತ್ರ್ಯದ ನೆರಳಿನಲ್ಲಿ ದಂಗೆಗಳು ಉಂಟು,ಹೋರಾಟಗಳೂ ಉಂಟು ಅವರವರ ಹಂಗಿಗೆ,ಅವರದೇ ಒಳಿತಿಗೆ ಎಲ್ಲದಕ್ಕೂ ಸ್ವಾತಂತ್ರ್ಯ,ಪ್ರಶ್ನಿಸುವ ಹಕ್ಕು ಪಡೆಯುವ ಹುಮಸ್ಸಿನಲಿ, ತುಳಿದ ದಾರಿ ಹುತಾತ್ಮರ ಹಾದಿಯಲ್ಲಿ ಇರಲಿಲ್ಲ..! ಕ್ರೌರ್ಯದ ಕರಿನೆರಳ ಛಾಯೆಗಳು ಹಗಲೇ ಸೊಕ್ಕಿನಲಿ ಉಂಡ ಸುಖದ ಸೂರೆಗೆ ಮುದುಡಿ ಉದುರಿದ ಕುಸುಮಗಳ ಬದುಕು ಬೆತ್ತಲಾಗಿತ್ತು.ಭವ್ಯ ಭಾರತದ ಗಾಂಧಿ ಕಂಡ ಕನಸು ಭಗ್ನ ಗೊಂಡಿತ್ತು. ನೀತಿ ಬೋಧೆಯ ತತ್ವ, ಹೊತ್ತ...