Posts

Showing posts from August 30, 2020

ಖಿದ್ಮಾ ಸಾಹಿತ್ಯ ಬಳಗದ ಪುರಸ್ಕಾರ

Image
 

ಆ ರಾತ್ರಿಯಲ್ಲಿ

 ಆ ರಾತ್ರಿಯಲ್ಲಿ ಸುತ್ತಲೂ ಹಚ್ಚ ಹಸಿರಿನ ತೋಟ  ನಡುವೆ ರಾಮಜ್ಜ ನ ಮನೆ..,ಕೂಡು ಕುಟುಂಬ ಸುಂದರ ಸಂಸಾರ ...ರಾಮಜ್ಜನ ಮಗ ಸುರೇಶ ೫ ವರ್ಷಗಳಿಂದ ಭಾರತೀಯ ಸೈನ್ಯ ದಲ್ಲಿ ಸೇವೆಯಲ್ಲಿದ್ದಾನೆ..ಸುರೇಶನ ಹೆಂಡತಿ ಸಂಗೀತಾ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನ ದೇಶಸೇವೆಗೆ ಪ್ರೋತ್ಸಾಹಿಸುತ್ತಾ ಚಂದದ ಸಂಸಾರವನ್ನು  ನಡೆಸುತ್ತಿದ್ದಾಳೆ...! ಸುರೇಶ ನ ಅಜ್ಜಿ ರಂಗಜ್ಜಿಗೆ ಸುರೇಶನ ಮೇಲೆ ತುಂಬಾ ಪ್ರೀತಿ.. ದಿನವೂ ಸುರೇಶನ ಪೋಟೋವನ್ನು ನೋಡುತ್ತಾ ನೆನೆಸಿಕೊಳ್ಳುತ್ತಾ ಇರುತ್ತಾಳೆ... ಬಾಲ್ಯದಲ್ಲೇ ತಾಯಿ ಕಳೆದುಕೊಂಡ ಸುರೇಶ ಅಜ್ಜಿ ಯ ಆರೈಕೆಯಲ್ಲಿ ಬೆಳೆಯುತ್ತಾನೆ...ಅಜ್ಜಿಯ ನೀತಿ ಕಥೆ, ಧೈರ್ಯ,ಸಾಹಸ, ತ್ಯಾಗ ಬಲಿದಾನ ಕಥೆಗಳ ತಿರುಳು ಸುರೇಶನನ್ನು ಸೈನ್ಯಕ್ಕೆ ಸೇರಿಸಲು ಪ್ರೇರೇಪಿಸಿದವು.. ಅಜ್ಜಿಯು ಸುರೇಶನ ಮಕ್ಕಳೊಂದಿಗೆ ಕಾಲ ಕಳೆಯುತ್ತಾ ಅವರಲ್ಲೇ ಸುರೇಶನನ್ನು ಕಾಣುತ್ತಾ ಇರುತ್ತಾಳೆ.. ರಾಮಜ್ಜ ಹೊಲಮನೆಯ ತೋಟದ ಕೆಲಸಗಳಲ್ಲೇ ಮಗ್ನನಾಗಿರುತ್ತಾನೆ.. ಸಂಗೀತಾ ತನ್ನ ಗಂಡನ ನೆನಪಿನಲ್ಲೇ ನಿತ್ಯ ದಿನ ದೂಡುತ್ತಿರುತ್ತಾಳೆ.. ಅದೊಂದು ದಿನ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ ಗಳ ಚಿತ್ತಾರ,ತಳಿರು ತೋರಣಗಳಿಂದ ಸಿಂಗಾರಗೊಂಡಿದೆ....ಅಡಗೆಮನೆಯಿಂದ ಘಮ ಘಮಿಸುವ ಹೋಳಿಗೆ ಹೂರಣ,ಗರಿ ಗರಿ ಚಕ್ಕುಲಿ ಹಪ್ಳ ಹಬ್ಬದೂಟದ ಅಡುಗೆಮನೆ ತುಂಬಿ ತುಳುಕಿದೆ.. ಮನೆಯ ತಲೆಬಾಗಿಲ ಚಿಗುರು ಮಾವಿನ ತಳಿರು ತೋರಣ ಬಾಳೆಕಂದಿನ ಸ್ವಾಗತ ಚಂದದ ಅಲಂಕಾರಗಳು ಹಬ್ಬದ ಸಂ...

ಜಡೆಗವನ ಸ್ಪರ್ಧೆ

Image
  ಜಡೆಗವನ ಸ್ಪರ್ಧೆ ಯಲ್ಲಿ ಅತ್ಯುತ್ತಮ ಸ್ಥಾನ

ವಾರದ ಸವಾಲು ಸ್ಪರ್ಧೆ

Image