Posts

Showing posts from July 19, 2020

ಸಾರ್ಥಕತೆ

ಸಾರ್ಥಕತೆ ************ ಸ್ವಂತಿಕೆ ಯಲ್ಲಿ ಸೊಗಸುಂಟು ಹಂಚಿ ಉಣ್ಣುವ ಬದುಕಲ್ಲಿ ನೆಮ್ಮದಿಯುಂಟು ಸದಾ ನಾನೆನ್ನುವ ಜೀವಕ್ಕೆ ಗೋಳುಂಟು, ನಾವು ನಮ್ಮವರೆಂದರೆ ಬದುಕು ಸಾರ್ಥಕವುಂಟೆಂದ ಮಾಲತೇಶ..!! ಸಿದ್ದು ಮೂರ್ತಿ

ಆತ್ಮಬಲ

ಆತ್ಮಬಲ ಶ್ರಮದಲ್ಲಿ ಫಲವುಂಟು, ಪ್ರಯತ್ನಗಳಲ್ಲಿ ಗೆಲುವುಂಟು ಛಲದೊಳು ಗುರಿಯುಂಟು ನಂಬಿಕೆ, ವಿಶ್ವಾಸ ಕಾಯಕ ನಿಷ್ಠೆ,ಆತ್ಮಬಲದ ಅರಿವುಳ್ಳ ಬದುಕ ರೂಢಿಸಿಕೊಂಡು ಹೋಗುವದ ತಿಳಿ ಶ್ರೀ ಮಾಲತೇಶ ಸಿದ್ದುಮೂರ್ತಿ

ನಿಗೂಢ ಛಾಯೆ

ನಿಗೂಢ ಛಾಯೆ ~~~~~~~~~~~ ಕಾರ್ಮುಗಿಲು ಕವಿದ ಕತ್ತಲು ಬೆಳಕ ನುಂಗಿ ವ್ಯಾಪಿಸುತ್ತಿದೆ ಚದುರುತ್ತಿವೆ ವೇಗದಲ್ಲಿ ಕರಿನೆರಳ ಛಾಯೆಗಳು ಕತ್ತಲೊಳಗೆ ಉಳಿದ ಜೀವಿಗಳ ಜೀವ ಹಿಂಡುವ ಹುನ್ನಾರದಲಿ... ದಿನದ ಬೆಳಕೋ ಮಾಮೂಲು ಮೌನಗತ್ತಲ ತಲುಪದ ಕಂದೀಲು ಊರ ತೊರೆದು ಬದುಕ ಅರಸಿ ದುಡಿವ ಛಲಗಳ ಹಿಂಡುಗಳು ಬೀದಿ ಬದಿಯ ಬಿಡಾರಗಳು ನಿತ್ಯ ವ್ಯಥೆಯ ಕಥೆಗಳು... ಅಲಲ್ಲಿ ಅಣಿಯಾದ ಜಾಲ ಹೊಂಚುಹಾಕಿ ಕುಳಿತಂತೆ ಕಾಲ ಕೊನೆಗಾಗಿ ಜೀವಿಗಳ ಉಳಿಗಾಲ ವ್ಯಥೆಯ ಹೊದ್ದ ಬದುಕು ನೆಮ್ಮದಿ ಹುರಿದು ಮುಕ್ಕಿದ ಭಯದಣಕು ಮನವು ಮೌನದೆರೆಯ ಮುಸುಕು.... ಬದುಕಿದು ಬೂದಿಯಂತೆ ನಿಗಿ ನಿಗಿಸುವ ಕೆಂಡಗಳ ಮರೆಮಾಚಿ ದಹಿಸುವ ಕಿಚ್ಚ ಒಡಲೊಳಗಿಟ್ಟು ಕಾಲದೊಳಗೆ ನಿಗೂಢ ದಂತೆ ವಾಸ್ತವದಲಿ ಅರಿವಾಗದಂತೆ ಬಂದೆರುಗುವ ವಿಧಿ ತಿಳಿಯದಂತೆ....   ~ಸಿದ್ದುಮೂರ್ತಿ.

ನಂಟು

ನಂಟು ಜೇನ ಸಿಹಿಯಂತೆ ಬಂಧಗಳು ಒಲವು ಜಿಗುಟು ಅಂಟಿನಂತೆ ಪ್ರೀತಿಯ ನವಿರು ಎಳೆಯ ಜಾಲ ನಲಿವು ಚೆಲುವು ಗಳಲ್ಲಿ ಬೆಸೆದುಕೊಂಡಂತೆ ಬಿಡಿಸಲಾಗದ ನಂಟು ಬದುಕಲ್ಲಿ ಉಳಿದಂತೆ -ಸಿದ್ದುಮೂರ್ತಿ

ಕನಸು

ಕನಸು ಕಾಣದ ತಿರುವುಗಳ ರಹದಾರಿ ಅರಿವುಗಳ ಮರೆಮಾಚಿ ನಿಗೂಢಗಳ ಸರಣಿ ಹಿಂದಿಟ್ಟು ಮುಂದಿಟ್ಟ ನಿಲುವುಗಳು ಭವಿತವ್ಯದ ಕನಸುಗಳಾಗಿ ಸಿದ್ದು ಮೂರ್ತಿ

ಹಾವಳಿ

ಹಾವಳಿ ಅಸಂಖ್ಯ ಜೀವಹಾನಿ ಮುಗಿಯದಂತಿದೆ ಈ ದುರಂತ ಕಹಾನಿ ಅಳಿಯುವದೆಂತು ಈ ಕರೋನಾದ ಹಾವಳಿ ಸಿದ್ದು ಮೂರ್ತಿ

ಇಬ್ಬನಿ

ಇಬ್ಬನಿ ಹಸಿರು ಹಾಸು ಹೊಳೆವ ಹನಿ ಮುತ್ತು ಪ್ರಕಾಶಿಸಿದೆ ಚೆಲುವಿನ ಗಮ್ಮತ್ತು.. ನಿಸರ್ಗ ಕರಾಮತ್ತು ~ಸಿದ್ದು ಮೂರ್ತಿ

ಒಲವು

ಒಲವು ಒಲವ ಮಾತು ಅರಳಿದಂತೆ ಸುಮ ನಗುತಲಿದೆ ಸಿದ್ದು ಮೂರ್ತಿ

ಮನ ಮುಗಿಲು

ಮನ ಮುಗಿಲು ಮನ ಮುಗಿಲು ಭಾವ ತಾರೆಗಳಂತೆ ಆಸೆ ಹೊಳಪು ಸಿದ್ದು ಮೂರ್ತಿ

ಹಸಿವು

ಹಸಿವು ~~~~~~ ಕಷ್ಟಗಳಿವು ಯಾರ ಹೊಣೆ, ಬದುಕ ಜೊತೆ ಅಣಿಯಾದ ಹೊರೆ ಹಗಲಿರುಳು ನೋವು ನಲಿವುಗಳ ಜೊತೆಗೆ ಹಸಿವೊತ್ತ ಒಡಲ ಜೀವ ನಲುಗಿದೆ. ದಿನವಿಡಿ ದುಡಿದು ದಣಿವ ಬದುಕ ಹಸಿದ ಚೀಲಕೆ ತುತ್ತುತುಂಬುವ ತನಕ ತೆವಳುವ ದಿನಗಳು ತ್ರಾಸ ಹೊತ್ತುಗಳು ಹಸಿವೇ ಬದುಕ ಗುರಿಯಾದ ಆಸೆಗಳು. ಬದಿಯ ಬಿಡಾರವೆ ,ಬದುಕ ವಠಾರ ಹರಡಿ ಕಲಸಿದ ಮರಳು ಸಿಮೆಂಟು ಜೆಲ್ಲಿಯೊಳಗೆ ಬೆರೆತ ಕನಸುಗಳ ಕಪಾಟು ಗಾರೆಗೆ ಬೆರೆತ ಬದುಕು ಹಸಿವನೀಗಿದ ಪಾಟು. ತಿರುಗಿದರು ಹಸಿವ ಕಳೆಯಲು,ಅಂಗಲಾಚಿ ಕಂಕುಳ ಕುಡಿ ಹೊತ್ತು,ಹಸಿದಜೀವ ಕೈ ಚಾಚಿ ಹರಕು ಚಿಂದಿ.,  ಚಿದ್ರಗೊಂಡ ಮನದಿಚ್ಚೆಗಳು ಹಸಿವು ನೀಗಿ ದೊಡನೆಯೆ ಅರಳೊ ಇಚ್ಚೆಗಳು. ಶ್ರಮಿಕರು ಅರಸಿದ, ಶ್ರಮದ ಬದುಕು ಜೊತೆಗಂಟಿದ ವ್ಯಥೆಯ  ಅಣುಕು ನೋವು ನಲಿವ ಮಿಶ್ರಣದ ಸೊಗಡು ಆಸೆ ಕನಸುಗಳ ಉಂಡು ತೇಗಿದೆ .,ಹಸಿವಿನ ಬದುಕು. ಸಿದ್ದು ಮೂರ್ತಿ