ಸತ್ಯಾರ್ಥ ಪ್ರಕಾಶ


ಸತ್ಯಾರ್ಥ ಪ್ರಕಾಶ

ಜೀವನದಲ್ಲಿ ಅನೇಕ ತೊಂದರೆಗಳು ಎದುರಾಗಿರುತ್ತಿರುತ್ತವೆ.
ಇದು ಎಲ್ಲರ ಜೀವನದಲ್ಲಿ ಮಾಮೂಲು, ಕಷ್ಟಗಳು ಬಡವ ಬಲ್ಲಿದ,  ಮೇಲು, ಕೀಳು  ಎಂಬಿತ್ಯಾದಿ ವರ್ಗದ  ಜನರನ್ನು ನೋಡುವುದಿಲ್ಲ.ಆದ್ದರಿಂದ  ಬದುಕು ಹೇಗೆ ಬರುತ್ತದೆಯೋ ಹಾಗೆ ಸ್ವೀಕರಿಸಬೇಕು.. ಸಾಮಾನ್ಯವಾಗಿ ವ್ಯಕ್ತಿ  ತನ್ನ ಜೀವನದಲ್ಲಿ ಯಾವುದೇ ಸಮಸ್ಯೆಗೆ ಎದೆಗುಂದದೆ ಸುಲಭ ವಾಗಿ ಎಲ್ಲ ಸಂದರ್ಭದಲ್ಲಿ  ಪರಿಸ್ಥಿತಿಯನ್ನು ಅರ್ಥಮಾಡಿಕೊಡು ನಿಭಾಯಿಸಿಕೊಂಡು ಹೋಗುವ ಮನಸ್ಥಿತಿ ಯನ್ನು ನಾವು ಹೊಂದಬೇಕು.. ಆ ಸಮರ್ಥತೆಯನ್ನು ನಾವು ಪಡೆಯಲು ಮೊದಲು ನಮ್ಮ ಮೊದಲ ವ್ಯಕ್ತಿತ್ವ ಗಳನ್ನುರೂಪಿಸಿಗೊಳ್ಳಬೇಕು.
ಮೊದಲಿಗೆ  ತಾಳ್ಮೆ., ಇದು ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ...
ತಾಳ್ಮೆ ಯು ಪರಿಸ್ಥಿತಿಯನ್ನು ಅವಲೋಕಿಸಲು ಸಮಯಾವಕಾಶ ನೀಡುತ್ತದೆ. ಅನಂತರ ಸಮಸ್ಯೆಗಳಿಗೆ ಪರಿಹಾರ ಗಳನ್ನು ಹುಡುಕಲು ಮುಂದಾಗಬೇಕು.. ಅಲ್ಲ ದೆ  ತಾಳ್ಮೆಯು  ಕೋಪವನ್ನು ನಿಯಂತ್ರಿಸುತ್ತದೆ.. ಕೋಪದಿಂದಗಬಹುದಾದ ಅನಾವುತಗಳನ್ನು ತಪ್ಪಿಸುತ್ತದೆ...
ತಾಳ್ಮೆಯಿಂದ  ನಾವು  ನಮ್ಮ ವ್ಯಕ್ತಿತ್ವ ದಲ್ಲಿ ಇನ್ನೊಂದು  ಸಮರ್ಥತೆ ಯನ್ನು  ಪಡೆದುಕೊಳ್ಳಬಹುದು  ಅದುವೇ ಅವಲೋಕನ, ವಿಶ್ಲೇಷಣೆ.. ಪರಿಸ್ಥಿತಿ ಎಂತಹುದೇ ಇರಲಿ ಅದರ  ಸ್ವರೂಪ,  ಮೂಲ, ಪರಿಹಾರಗಳನ್ನು ಕಂಡುಕೊಳ್ಳುವ  ಸಾಮರ್ಥ್ಯ...  ಪ್ರಸ್ತುತ ದಿನಗಳಲ್ಲಿ ಎದುರಿಸುವ ಹತ್ತಾರು ಸಮಸ್ಯೆಗಳು.ವಿದ್ಯೆ, ವ್ಯಾಪಾರ, ಆರೋಗ್ಯ, ವೃತ್ತಿ, ದಾಂಪತ್ಯ.
ವ್ಯವಹಾರ.. ಇವೆಲ್ಲದರ ಸಮಸ್ಯೆಗಳಿಗೆ., ತಾಳ್ಮೆ  ಒಂದು  ಹಂತದ
ಪರಿಹಾರಗಳನ್ನು  ಒದಗಿಸುತ್ತದೆ...
   
       ಮುಂದುವರೆಯುತ್ತದೆ.........

Comments

Popular posts from this blog

ಆಧ್ಯಾತ್ಮಿಕ ವಿಚಾರ